ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕಾಗಿ ಹೋರಾಟ ನಿರಂತರ ಎನ್ನುತ್ತಿರುವ ಸಮುದಾಯದ ಮೊದಲ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ‘ವಿಜಯನಗರ ರಣತಂತ್ರ ಗಮನಸೆಳೆದಿದೆ.
ಬೆಂಗಳೂರಿನಲ್ಲಿರುವ ಪಂಚಮಸಾಲಿ- ಲಿಂಗಾಯತ ಗೌಡ- ಮಲೆಗೌಡ-ದೀಕ್ಷಾ ಲಿಂಗಾಯತರ ಸಂಘಟನೆಗಾಗಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಇದೀಗ ಉದ್ಯೋಗ ಮೀಸಲಾತಿ ಹೋರಾಟಕ್ಕೆ ವೇದಿಕೆ ಸಿದ್ದವಾಗುತ್ತಿದೆ.
ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಯುವಕರ ಉದ್ಯೋಗಕ್ಕಾಗಿ ರಾಜ್ಯ ಸರ್ಕಾರದ 2A / 2D ಹಾಗೂ ಕೇಂದ್ರ ಸರ್ಕಾರದ OBC ಮೀಸಲಾತಿ ಅನುಷ್ಠಾನಕ್ಕೆ ಹಕ್ಕೊತ್ತಾಯಿಸಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಸಂಘಟನಾ ಪೂರ್ವಭಾವಿ ಸಭೆ ಏರ್ಪಟ್ಟಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಹಾಗೂ ವಿಜಯನಗರದಲ್ಲಿರುವ ಸಮಾಜದ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿ ಕಾರ್ಯತಂತ್ರ ರೂಪಿಸಲಿದ್ದಾರೆ.