ಬೆಂಗಳೂರು: ಸಮಾಜವಾದಿ ಮುಖವಾಡ ಧರಿಸಿಕೊಂಡೇ ನಾಡಿನ ಸಮಸ್ತ ಜನರಿಗೆಮಕ್ಮಲ್ ಟೋಪಿ ಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖವಾಡ ಕಳಚಿ ಬಿದ್ದಿದೆ ಎಂದು ಪ್ರತಿಪಕ್ಷ ಬಿಜೆಪಿ ಬಣ್ಣಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ದಿಂದ ಪರಿಹಾರ ಪಡೆದ ಭೂಮಿಯನ್ನೇ ಖರೀದಿಸಿ, ಮಗ ಸೂಪರ್ ಸಿಎಂ ಡಾ.ಯತೀಂದ್ರ ಅವರನ್ನು ಮೂಡಾ ಸದಸ್ಯರನ್ನಾಗಿ ಮಾಡಿ, ಅವರ ಪ್ರಭಾವ ಬಳಸಿ ತಾಯಿಯ ಮೂಲಕ 14 ಸೈಟುಗಳನ್ನು ಕಬಳಿಸಿಕೊಂಡದ್ದು ನಾಡಿನ ಜನರಿಗೆ ತಿಳಿದಿದೆ ಎಂದು ಬಿಜೆಪಿ ಹೇಳಿದೆ.
ಸಮಾಜವಾದಿ ಮುಖವಾಡ ಧರಿಸಿಕೊಂಡೇ ನಾಡಿನ ಸಮಸ್ತ ಜನರಿಗೆಮಕ್ಮಲ್ ಟೋಪಿ ಹಾಕುತ್ತಿರುವ ಮುಖ್ಯಮಂತ್ರಿ @siddaramaiah ನವರ ಮುಖವಾಡ ಕಳಚಿ ಬಿದ್ದಿದೆ.
ಮೂಡಾದಿಂದ ಪರಿಹಾರ ಪಡೆದ ಭೂಮಿಯನ್ನೇ ಖರೀದಿಸಿ, ಮಗ ಸೂಪರ್ ಸಿಎಂ @Dr_Yathindra_S ಅವರನ್ನು ಮೂಡಾ ಸದಸ್ಯರನ್ನಾಗಿ ಮಾಡಿ, ಅವರ ಪ್ರಭಾವ ಬಳಸಿ ತಾಯಿಯ ಮೂಲಕ 14 ಸೈಟುಗಳನ್ನು ಕಬಳಿಸಿಕೊಂಡದ್ದು… pic.twitter.com/whdI4h1LTh
— BJP Karnataka (@BJP4Karnataka) July 11, 2024
ಸಿದ್ದರಾಮಯ್ಯ ಬಗ್ಗೆ ಸಾಮಾಜಿಕ ಜಾಲತಾಣ ‘X’ನಲ್ಲಿ ವೀಡಿಯೋ ಹಂಚಿಕೊಂಡಿರುವ ಬಿಜೆಪಿ, 1991ರ ಭೂ ಕಾನೂನಿನ ಪ್ರಕಾರ 3ರಿಂದ 4 ಎಕರೆ ಜಮೀನನ್ನು ಪ್ರಾಧಿಕಾರಗಳಿಗೆ ಬಿಟ್ಟುಕೊಟ್ಟರೆ 60/40 ಎರಡು ನಿವೇಶನ ನೀಡಬೇಕು. ಆದರೆ, ಮೂಡಾದಿಂದ ಪಡೆದದ್ದು ಮಾತ್ರ ಬರೋಬ್ಬರಿ 14 ಸೈಟುಗಳು. ಗಂಡ-ಹೆಂಡತಿ-ಮಗ-ಭಾವಮೈದುನ ಸೇರಿದ ಈ ಕ್ರೇಜಿ ಕುಟುಂಬ ಬಡ ಜನರಿಗೆ ಸೇರಬೇಕಾದ ಮೂಡಾ ಸೈಟುಗಳನ್ನು ಹೇಗೆಲ್ಲಾ ಲಪಟಾಯಿಸಿತು ಎನ್ನುವ ಪರಿಪೂರ್ಣ ಮಾಹಿತಿ ಈ ವೀಡಿಯೋದಲ್ಲಿ ಇದೆ ಎಂದಿದೆ.
ಸಮಾಜವಾದಿ ಮುಖವಾಡ ಧರಿಸಿಕೊಂಡೇ ನಾಡಿನ ಸಮಸ್ತ ಜನರಿಗೆಮಕ್ಮಲ್ ಟೋಪಿ ಹಾಕುತ್ತಿರುವ ಮುಖ್ಯಮಂತ್ರಿ @siddaramaiah ನವರ ಮುಖವಾಡ ಕಳಚಿ ಬಿದ್ದಿದೆ.
ಮೂಡಾದಿಂದ ಪರಿಹಾರ ಪಡೆದ ಭೂಮಿಯನ್ನೇ ಖರೀದಿಸಿ, ಮಗ ಸೂಪರ್ ಸಿಎಂ @Dr_Yathindra_S ಅವರನ್ನು ಮೂಡಾ ಸದಸ್ಯರನ್ನಾಗಿ ಮಾಡಿ, ಅವರ ಪ್ರಭಾವ ಬಳಸಿ ತಾಯಿಯ ಮೂಲಕ 14 ಸೈಟುಗಳನ್ನು ಕಬಳಿಸಿಕೊಂಡದ್ದು… pic.twitter.com/whdI4h1LTh
— BJP Karnataka (@BJP4Karnataka) July 11, 2024