ನವದೆಹಲಿ; ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು 72 ಸಚಿವರ ಸಂಪುಟ ಭಾನುವಾರ ರಚನೆಯಾಗಿದೆ. ಸೋಮವಾರ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ನೂತನ ಸಚಿವರ ಖಾತೆಗಳ ಹಂಚಿಕೆ ವಿವರ ಹೀಗಿದೆ;
ರಾಜನಾಥ್ ಸಿಂಗ್: ರಕ್ಷಣೆ
ಅಮಿತ್ ಶಾ : ಗೃಹ; ಸಹಕಾರ.
ನಿತಿನ್ ಜೈರಾಮ್ ಗಡ್ಕರಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ.
ಜಗತ್ ಪ್ರಕಾಶ್ ನಡ್ಡಾ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ.
ಶಿವರಾಜ್ ಸಿಂಗ್ ಚೌಹಾಣ್ : ಕೃಷಿ ಮತ್ತು ರೈತರ ಕಲ್ಯಾಣ; ಗ್ರಾಮೀಣಾಭಿವೃದ್ಧಿ.
ನಿರ್ಮಲಾ ಸೀತಾರಾಮನ್ : ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ.
ಡಾ. ಸುಬ್ರಹ್ಮಣ್ಯಂ ಜೈಶಂಕರ್ : ವಿದೇಶಾಂಗ ವ್ಯವಹಾರ.
ಮನೋಹರ್ ಲಾಲ್ ಖಟ್ಟರ್ : ವಸತಿ ಮತ್ತು ನಗರ ವ್ಯವಹಾರ, ವಿದ್ಯುತ್.
ಎಚ್.ಡಿ.ಕುಮಾರಸ್ವಾಮಿ: ಕೈಗಾರಿಕೆ, ಉಕ್ಕು.
ಪಿಯೂಷ್ ಗೋಯಲ್: ವಾಣಿಜ್ಯ ಮತ್ತು ಕೈಗಾರಿಕೆ.
ಧರ್ಮೇಂದ್ರ ಪ್ರಧಾನ್ : ಶಿಕ್ಷಣ,
ಜಿತನ್ ರಾಮ್ ಮಾಂಝಿ : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ.
ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) : ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ.
ಸರ್ಬಾನಂದ ಸೋನೋವಾಲ್ : ಬಂದರು, ಹಡಗು ಮತ್ತು ಜಲಸಾರಿಗೆ.
ವೀರೇಂದ್ರ ಕುಮಾರ್ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಕಿಂಜರಾಪು ರಾಮಮೋಹನ್ ನಾಯ್ಡು : ನಾಗರಿಕ ವಿಮಾನಯಾನ.
ಪ್ರಲ್ಹಾದ್ ಜೋಶಿ : ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ.
ಜುಯಲ್ ಓರಮ್ : ಬುಡಕಟ್ಟು ವ್ಯವಹಾರ
ಗಿರಿರಾಜ್ ಸಿಂಗ್ : ಜವಳಿ.
ಅಶ್ವಿನಿ ವೈಷ್ಣವ್ : ರೈಲ್ವೆ, ಮಾಹಿತಿ ಮತ್ತು ಪ್ರಸಾರ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.
ಜ್ಯೋತಿರಾದಿತ್ಯ ಎಂ. ಸಿಂಧಿಯಾ: ಸಂಪರ್ಕ, ಈಶಾನ್ಯ ಪ್ರದೇಶ ಅಭಿವೃದ್ಧಿ.
ಭೂಪೇಂದರ್ ಯಾದವ್ : ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ.
ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಮನ್ಸುಖ್ ಮಾಂಡವಿಯಾ : ಕಾರ್ಮಿಕ ಮತ್ತು ಉದ್ಯೋಗ, ಯುವ ವ್ಯವಹಾರ ಮತ್ತು ಕ್ರೀಡೆ.
ಜಿ.ಕಿಶನ್ ರೆಡ್ಡಿ : ಕಲ್ಲಿದ್ದಲು ಸಚಿವ; ಗಣಿ.
ಚಿರಾಗ್ ಪಾಸ್ವಾನ್ : ಆಹಾರ ಸಂಸ್ಕರಣಾ ಕೈಗಾರಿಕೆ.
ಸಿ.ಆರ್. ಪಾಟೀಲ್ : ಜಲಶಕ್ತಿ.
Portfolio for PM Modi-led Union Cabinet announced
Amit Shah, Rajnath Singh, Nitin Gadkari, Nirmala Sitharaman, Dr S Jaishankar Piyush Goyal and Ashwini Vaishnaw retain their ministries. pic.twitter.com/LkZ0MQiTnk
ರಾವ್ ಇಂದರ್ಜಿತ್ ಸಿಂಗ್ (ಸ್ವತಂತ್ರ ಉಸ್ತುವಾರಿ): ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ, ಯೋಜನೆ, ಸಂಸ್ಕೃತಿ.
ಡಾ. ಜಿತೇಂದ್ರ ಸಿಂಗ್ (ಸ್ವತಂತ್ರ): ವಿಜ್ಞಾನ ಮತ್ತು ತಂತ್ರಜ್ಞಾನ , ಭೂ ವಿಜ್ಞಾನ, ಪ್ರಧಾನಿ ಕಚೇರಿಯಲ್ಲಿ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ, ಬಾಹ್ಯಾಕಾಶ ಇಲಾಖೆ.
ಅರ್ಜುನ್ ರಾಮ್ ಮೇಘವಾಲ್ (ಸ್ವತಂತ್ರ): ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರ.
ಜಾಧವ್ ಪ್ರತಾಪ್ರಾವ್ ಗಣಪತ್ರಾವ್ (ಸ್ವತಂತ್ರ): ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
ಜಯಂತ್ ಚೌಧರಿ (ಸ್ವತಂತ್ರ): ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ, ಶಿಕ್ಷಣ.
ಜಿತಿನ್ ಪ್ರಸಾದ್ –?: ವಾಣಿಜ್ಯ ಮತ್ತು ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.
ಶ್ರೀಪಾದ್ ಯೆಶೋ ನಾಯಕ್: ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ.
ಪಂಕಜ್ ಚೌಧರಿ : ಹಣಕಾಸು.
ಕ್ರಿಶನ್ ಪಾಲ್ : ಸಹಕಾರ.
ರಾಮದಾಸ್ ಅಠವಳೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.
ರಾಮ್ ನಾಥ್ ಠಾಕೂರ್ : ಕೃಷಿ ಮತ್ತು ರೈತರ ಕಲ್ಯಾಣ.
ನಿತ್ಯಾನಂದ ರಾಯ್ : ಗೃಹ.
ಅನುಪ್ರಿಯಾ ಪಟೇಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕಗಳು ಮತ್ತು ರಸಗೊಬ್ಬರ.
ವಿ.ಸೋಮಣ್ಣ: ಜಲಶಕ್ತಿ, ರೈಲ್ವೇ.
ಚಂದ್ರಶೇಖರ್ ಪೆಮ್ಮಸಾನಿ: ಗ್ರಾಮೀಣಾಭಿವೃದ್ಧಿ, ಸಂವಹನ.
ಪ್ರೊ. ಎಸ್.ಪಿ. ಸಿಂಗ್ ಬಾಘೇಲ್: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಪಂಚಾಯತ್ ರಾಜ್.
ಶೋಭಾ ಕರಂದ್ಲಾಜೆ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ, ಕಾರ್ಮಿಕ ಮತ್ತು ಉದ್ಯೋಗ.
ಕೀರ್ತಿವರ್ಧನ್ ಸಿಂಗ್: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ವಿದೇಶಾಂಗ ವ್ಯವಹಾರ.
ಬಿ.ಎಲ್.ವರ್ಮಾ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.
ಶಂತನು ಠಾಕೂರ್: ಬಂದರು, ಹಡಗು ಮತ್ತು ಜಲಮಾರ್ಗ.
ಸುರೇಶ್ ಗೋಪಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರವಾಸೋದ್ಯಮ.
ಡಾ. ಎಲ್. ಮುರುಗನ್: ಮಾಹಿತಿ ಮತ್ತು ಪ್ರಸಾರ, ಸಂಸದೀಯ ವ್ಯವಹಾರ.
ಅಜಯ್ ತಮ್ತಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿ.
ಬಂಡಿ ಸಂಜಯ್ ಕುಮಾರ್ : ಗೃಹ.
ಕಮಲೇಶ್ ಪಾಸ್ವಾನ್: ಗ್ರಾಮೀಣಾಭಿವೃದ್ಧಿ.
ಭಗೀರಥ ಚೌಧರಿ: ಕೃಷಿ, ರೈತರ ಕಲ್ಯಾಣ.
ಸತೀಶ್ ಚಂದ್ರ ದುಬೆ : ಕಲ್ಲಿದ್ದಲು, ಗಣಿ.
ಸಂಜಯ್ ಸೇಠ್ : ರಕ್ಷಣೆ.
ರವನೀತ್ ಸಿಂಗ್: ಆಹಾರ ಸಂಸ್ಕರಣಾ ಕೈಗಾರಿಕೆ, ರೈಲ್ವೇ.
ದುರ್ಗಾದಾಸ್ ಯುಕೆ: ಬುಡಕಟ್ಟು ವ್ಯವಹಾರ.
ರಕ್ಷಾ ನಿಖಿಲ್ ಖಡ್ಸೆ: ಯುವ ವ್ಯವಹಾರ ಮತ್ತು ಕ್ರೀಡೆ.
ಸುಕಾಂತ ಮಜುಂದಾರ್ : ಶಿಕ್ಷಣ, ಈಶಾನ್ಯ ಪ್ರದೇಶದ ಅಭಿವೃದ್ಧಿ.
ಸಾವಿತ್ರಿ ಠಾಕೂರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ.
ತೋಖಾನ್ ಸಾಹು: ವಸತಿ ಮತ್ತು ನಗರ ವ್ಯವಹಾರ.
ರಾಜ್ ಭೂಷಣ್ ಚೌಧರಿ : ಜಲಶಕ್ತಿ.
ಭೂಪತಿ ರಾಜು ಶ್ರೀನಿವಾಸ ವರ್ಮಾ : ಭಾರೀ ಕೈಗಾರಿಕೆ, ಉಕ್ಕು.
ಹರ್ಷ್ ಮಲ್ಹೋತ್ರಾ : ಕಾರ್ಪೊರೇಟ್ ವ್ಯವಹಾರ. ರಸ್ತೆ ಸಾರಿಗೆ ಮತ್ತು ಹೆದ್ದಾರಿ.
ನಿಮುಬೆನ್ ಜಯಂತಿಭಾಯ್ ಬಂಬಾನಿಯಾ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ.
ಮುರಳೀಧರ್ ಮೊಹೋಲ್: ಸಹಕಾರ, ನಾಗರಿಕ ವಿಮಾನಯಾನ.
ಜಾರ್ಜ್ ಕುರಿಯನ್: ಅಲ್ಪಸಂಖ್ಯಾತ ವ್ಯವಹಾರ, ಮತ್ತುಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ.