ದೆಹಲಿ: ಪ್ರಧಾನಿ ನರಾಎಂದ್ರ ಮೋದಿ ಅವರ ಜನ್ಮದಿನ ಅಂಗವಾಗಿ ಆಯೋಜಿಸಲಾದ ರಕ್ತದಾನ ಅಮೃತ ಮಹೋತ್ಸವ ಭಾರೀ ಯಶಸ್ಸು ಕಂಡಿದೆ. ಮೋದಿ ಜನ್ಮ ದಿನಕ್ಕೆ ಶುಭಾಶಯಗಳ ಹೂಮಳೆಯಷ್ಟೇ ಅಲ್ಲ, ಲಕ್ಷಾಂತರ ಜನರ ಜೀವ ಉಳಿಸುವ ಕಾಯಕದ ಮೂಲಕ ಜನರು ಶುಭ ಹಾರೈಸಿ ಹೊಸ ಪರಂಪರೆಗೆ ಮುನ್ನುಡಿ ಬರೆದಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಏರ್ಪಡಿಸಲಾದ ಸೇವಾ ಪಾಕ್ಷಿಕದ ಅಂಗವಾಗಿ ದೇಶದಾದ್ಯಂತ ನಡೆದ ರಕ್ತದಾನ ಅಮೃತ ಮಹೋತ್ಸವದಡಿಯಲ್ಲಿ 1.61 ಲಕ್ಷ ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ ಅಷ್ಟೇ ಅಲ್ಲ, ರಕ್ತದಾನಕ್ಕಾಗಿ eraktkosh.in ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದೆ.
ಪ್ರಧಾನಿ ಶ್ರೀ @narendramodi ಅವರ ಜನ್ಮದಿನದ ಹಿನ್ನೆಲೆಯಲ್ಲಿ ಏರ್ಪಡಿಸಲಾದ ಸೇವಾ ಪಾಕ್ಷಿಕದ ಅಂಗವಾಗಿ ದೇಶದಾದ್ಯಂತ ನಡೆದ ರಕ್ತದಾನ ಅಮೃತ ಮಹೋತ್ಸವದಡಿಯಲ್ಲಿ 1.61 ಲಕ್ಷ ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ರಕ್ತದಾನಕ್ಕಾಗಿ https://t.co/fOsiNGaHLc ನಲ್ಲಿ ನೋಂದಾಯಿಸಿ.#SevaPakhwada pic.twitter.com/vrkEYVulSb
— BJP Karnataka (@BJP4Karnataka) September 23, 2022