ದೆಹಲಿ: ಮಣಿಪುರ ಹಿಂಸಾಚಾರ ಸಂದರ್ಭದಲ್ಲಿ ಸುಮಾರು 40 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಮೈಟಿ ಅಥವಾ ಮೀಟೈ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮಣಿಪುರದಲ್ಲಿ ಕುಕಿ ಉಗ್ರರು ಹಲವು ದಿನಗಳಿಂದ ಸರಣಿ ದಾಳಿ ನಡೆಸಿದ್ದಾರೆ. ಇದರಿಂದಾಗಿ ಮಣಿಪುರ ಸಮರ ಸಂತ್ರಸ್ತ ರಾಜ್ಯವೆಂಬಂತಾಗಿದೆ.
ಮಣಿಪುರ ಹಿಂಸಾಚಾರವನ್ನು ನಿಭಾಯಿಸಲು ಸೇನೆ ಹರಸಾಹಸ ಪಡುತ್ತಿದ್ದು, ಉಗ್ರರ ದಾಳಿಗೆ ಪ್ರತಿಯಾಗಿ ಕಠಿಣ ಕಾರ್ಯಾಚರಣೆ ನಡೆಸುತ್ತಿದೆ. ಈ ನಡುವೆ, ಎನ್ಕೌಂಟರ್ ಮೂಲಕ ಸೇನೆ ಹಾಗೂ ಭದ್ರತಾ ಸಿಬ್ಬಂದಿ ಸುಮಾರು 40 ಮಂದಿ ಉಗ್ರರನ್ನು ಸದೆಬಡಿದಿದೆ.
ಇಂಫಾಲ್ ಕಣಿವೆ ಮತ್ತು ಸುತ್ತಮುತ್ತ ಐದಾರು ಕಡೆ ಈ ಎನ್ಕೌಂಟರ್ ನಡೆದಿದ್ದು, ಈ ವೇಳೆ ಗುಂಡಿನ ಚಕಮಕಿಯಲ್ಲಿ 40 ಮಂದಿ ಸಾವನ್ನಪಿದ್ದಾರೆ ಎಂದು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಕೂಡಾ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮಣಿಪುರ ರಾಜ್ಯಾದಲ್ಲಿ ಭದ್ರತಾ ಪಡೆಗಳು 40 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
At least 33 'terrorists' of Kuki militant outfits were killed in a series of encounters with the security forces since the ethnic violence broke out in #Manipur on May 3, Chief Minister #NBirenSingh said. pic.twitter.com/TnOtd2t9pe
— IANS (@ians_india) May 28, 2023