ವೈದ್ಯರಾಗುವ ಹೊಂಗನಸು ಹೊತ್ತವರ ಪಾಲಿನಲ್ಲಿ ಮಂದಹಾಸ.. ಕಡಲತಡಿಯ ಜನರ ಪಾಲಿಗೂ ಸಂತಸದ ಕ್ಷಣ.. ಕರಾವಳಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಸುಸಜ್ಜಿತ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಬಗ್ಗೆ ಜನರಿಗಿದ್ದ ನಿರೀಕ್ಷೆ ಫಲಪ್ರದವಾದ ಸಂತಸ. ಈ ಸಂತಸದ ಸನ್ನಿವೇಶಕ್ಕೆ ಕರಾವಳಿ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮ ಸಾಕ್ಷಿಯಾಯಿತು..
ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪ್ರತಿಷ್ಠಿತ ಕರಾವಳಿ ಕಾಲೇಜ್ ಸಮೂಹದ ಜಿ.ಆರ್.ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ‘ಎಲಿರ್ಕ್ಸಿಸ್’ ಉದ್ಘಾಟನೆ ಸಮಾರಂಭ ವೈದ್ಯಕೀಯ ಕ್ಷೇತ್ರದ ಕುತೂಹಲದ ಕೇಂದ್ರಬಿಂದುವಾಯಿತು. ಎಂಬಿಬಿಎಸ್ ಸಹಿತ ನೂತನ ವರ್ಷದ ವೈದ್ಯ ವಿದ್ಯಾರ್ಥಿಗಳನ್ನು ಜಿ.ಆರ್.ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮುಖ್ಯಸ್ಥರು ಶಿಕ್ಷಣ ಯಜ್ಞಕ್ಜೆ ಬರಮಾಡಿಕೊಂಡ ವೈಖರಿ ಅರ್ಥಪೂರ್ಣ ಸಮಾರಂಭವೆನಿಸಿತು. ಸ್ವತಃ ಜಿ.ಆರ್. ಮೆಡಿಕಲ್ ಕಾಲೇಜ್ ಅಧ್ಯಕ್ಷ ಗಣೇಶ್ ರಾವ್ ಅವರೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭವಿಷ್ಯದ ವೈದ್ಯರನ್ನು ಬರಮಾಡಿಕೊಂಡರು.
ಜಿ.ಆರ್.ಎಜುಕೇಶನ್ ಟ್ರಸ್ಟ್ ವತಿಯಿಂದ ನೂತನ ಬ್ಯಾಚ್ ವೈದ್ಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಸಾಂಪ್ರದಾಯಿಕ ಉಡುಪು ದಿನ ‘ಎಲಿರ್ಕ್ಸಿಸ್ 2021-22′ ಕಾರ್ಯಕ್ರಮ ವೈಶಿಷ್ಟ್ಯಪೂರ್ಣ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.
‘ಎಲಿರ್ಕ್ಸಿಸ್’ ಸಂಭ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿ ಸಮೂಹವನ್ನು ಅಭಿನಂಧಿಸಿ ಪ್ರೋತ್ಸಾಹಿಸಿದ ಗಣೇಶ್ ರಾವ್, ಪ್ರತಿಯೊಬ್ಬರಲ್ಲಿಯೂ ಸಾಧಿಸುವ ಛಲ ಇರಬೇಕು. ಅದಕ್ಕೆ ತಕ್ಕಂತೆ ಪ್ರಯತ್ನ, ಸತತ ಪರಿಶ್ರಮವೂ ಬೇಕು. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣಬೇಕು. ಮಾಡುವ ಕೆಲಸದಲ್ಲಿ ಸಂತೋಷ ಮತ್ತು ತೃಪ್ತಿ ಇರಬೇಕು ಎಂದರು.
ಜಿ.ಆರ್.ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಲತಾ ಜಿ. ರಾವ್, ಡೀನ್ ಡಾ. ಶ್ರೀಶ ಖಂಡಿಗೆ, ಪ್ರಿನ್ಸಿಪಾಲ್ ಡಾ. ಪಾಂಡುರಂಗ ಕಾಮತ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.