ಮಂಗಳೂರು: ಕೇಸರಿ ಭದ್ರಕೋಟೆಯಂತಿರುವ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್-ಬಿಜೆಪಿ ಕಾದಾಟದಲ್ಲಿ ತೊಡಗಿದರೆ, ಮತಗಳನ್ನು ಕಬಳಿಸುವ ಪ್ರಯತ್ನ ಪಕ್ಷೇತರರದ್ದು. ಈ ಬಾರಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಜೊತೆಯಲ್ಲೇ ಇತರ 9 ಮಂದಿ ಕಣಕ್ಕಿಳಿದಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿದೆ. ಈ ನಡುವೆ, ಒಬ್ಬ ಅಭ್ಯರ್ಥಿ ಎರಡು ಪಕ್ಷಗಳ ಹುರಿಯಾಳಾಗಿ ನಾಮಪತ್ರ ಸಲ್ಲಿಸಿರುವ ಅಚ್ಚರಿಯ ವಿದ್ಯಮಾನಕ್ಕೂ ಕರಾವಳಿಯ ಈ ಕ್ಷೇತ್ರ ಸಾಕ್ಷಿಯಾಗಿದೆ.
ಅಭ್ಯರ್ಥಿಗಳ ವಿವರ:
- ಕ್ಯಾ. ಬೃಜೇಶ್ ಚೌಟ (ಬಿಜೆಪಿ),
- ಆರ್.ಪದ್ಮರಾಜ್ (ಕಾಂಗ್ರೆಸ್),
- ಸುಪ್ರಿತ್ ಕುಮಾರ್ ಪೂಜಾರಿ (ಜನಹಿತ ಪಕ್ಷ ಮತ್ತು ಜೆಡಿಯು),
- ರಂಜಿನಿ (ಕೆಆರ್ಎಸ್),
- ಕಾಂತಪ್ಪ (ಬಿಎಸ್ಪಿ),
- ಕೆ.ಇ.ಮನೋಹರ (ಉತ್ತಮ ಪ್ರಜಾಕೀಯ ಪಾರ್ಟಿ),
- ದುರ್ಗಾಪ್ರಸಾದ್ (ಕರುನಾಡು ಸೇವಕರ ಪಾರ್ಟಿ),
- ದೀಪಕ್ ರಾಜೇಶ್ ಕುವೆಲ್ಲೋ (ಪಕ್ಷೇತರ),
- ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ (ಪಕ್ಷೇತರ),
- ಸತೀಶ್ ಬಿ. (ಪಕ್ಷೇತರ),
- ಮ್ಯಾಕ್ಷಿಂ ಪಿಂಟೋ (ಪಕ್ಷೇತರ).
ಒಬ್ಬ ಅಭ್ಯರ್ಥಿ ಎರಡು ಪಕ್ಷಗಳ ಹುರಿಯಾಳು:
ಸುಪ್ರಿತ್ ಕುಮಾರ್ ಪೂಜಾರಿ ಎಂಬವರು ಎರಡು ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಜನಹಿತ ಪಕ್ಷ ಮತ್ತು ಜೆಡಿಯು ಪಕ್ಷದಿಂದ ನಾಮಪತ್ರ ಸಲ್ಲಿಸಿರುವ ಸುಪ್ರೀತ್ ಕುಮಾರ್ ಪೂಜಾರಿ ಅಂತಿಮವಾಗಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಹಿಂದೆಯೂ ಹಲವು ಚುನಾವಣೆಗಳಲ್ಲಿ ಇವರು ಬೇರೆ ಬೇರೆ ಪಕ್ಷಗಳಿಂದ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು.


























































