ನವದೆಹಲಿ: ಏಳು ರಾಜ್ಯಗಳಿಂದ ರಾಜ್ಯಸಭೇಗೆ ನಡೆಯುವ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾನುವಾರ 14 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಉತ್ತರ ಪ್ರದೇಶದ ಮೇಲೆ ಗಮನವನ್ನು ಕೇಂದ್ರೀಕರಿಸಿರುವ ಬಿಜೆಪಿ ಅಲ್ಲಿ ಏಳು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ.
ಉತ್ತರ ಪ್ರದೇಶದಲ್ಲಿ ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಮಾಜಿ ಸಚಿವ ಆರ್.ಪಿ.ಎನ್. ಸಿಂಗ್, ಚೌಧರಿ ತೇಜ್ವೀರ್ ಸಿಂಗ್, ಸಾಧನಾ ಸಿಂಗ್, ಅಮರ್ಪಾಲ್ ಮೌರ್ಯ, ಸಂಗೀತಾ ಬಲ್ವಂತ್ ಮತ್ತು ನವೀನ್ ಜೈನ್ ಬಿಜೆಪಿ ಸ್ಪರ್ಧಿಗಳಾಗಿದ್ದಾರೆ.
ಬಿಹಾರದಿಂದ ಧರ್ಮಶೀಲ ಗುಪ್ತಾ ಮತ್ತು ಭೀಮ್ ಸಿಂಗ್, ಛತ್ತೀಸ್ಗಢದಿಂದ ರಾಜಾ ದೇವೇಂದ್ರ ಪ್ರತಾಪ್ ಸಿಂಗ್, ಹರಿಯಾಣದಿಂದ ಸುಭಾಷ್ ಬರಾಲಾ, ಕರ್ನಾಟಕದ ನಾರಾಯಣ ಕೃಷ್ಣಸಾ ಭಾಂಡಗೆ, ಉತ್ತರಾಖಂಡದಿಂದ ಮಹೇಂದ್ರ ಭಟ್ ಮತ್ತು ಪಶ್ಚಿಮ ಬಂಗಾಳದಿಂದ ಸಾಮಿಕ್ ಭಟ್ಟಾಚಾರ್ಯ ಅವರ ಹೆಸರನ್ನು ಪ್ರಕಟಿಸಿದೆ.