ಜರ್ಮನಿ ಸರ್ಕಾರದ ಫೆಡರಲ್ ಸಚಿವಾಲಯ ಇಕಾನಾಮಿಕ್ ಕೋಆಪರೇಶನ್ ಅಂಡ್ ಡೆವಲಪ್ಮೆಂಟ್ (BMZ) ನ ಉನ್ನತ ಮಟ್ಟದ ನಿಯೋಗವು ತಮ್ಮ ಭಾರತದ ಪ್ರವಾಸದ ಭಾಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಭೇಟಿ ನೀಡಿ ನಿಗಮದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ದೃಷ್ಟಿ ದೋಷ ಹೊಂದಿದ ಪ್ರಯಾಣಿಕರ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಸಹಾಯಕ ಧ್ವನಿ-ನೇವಿಗೇಶನ್ ಪರಿಹಾರ “ಧ್ವನಿ ಸ್ಪಂದನ – ಆನ್ಬೋರ್ಡ್” ಬಗ್ಗೆ ನಿಯೋಗದ ಸದಸ್ಯರು ಖುದ್ದು ಮಾಹಿತಿ ಪಡೆದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ಧ್ವನಿ ಸ್ಪಂದನ ಯೋಜನೆಯ ಕುರಿತು ವಿವರವಾಗಿ ಮಾಹಿತಿ ನೀಡಿ, ಈ ಯೋಜನೆಗೆ ಭಾರತದ ಸರ್ಕಾರದಿಂದ ದೊರೆತ ಪ್ರಶಸ್ತಿಯ ಬಗ್ಗೆ ಗಮನಸೆಳೆದರು.

ಈ ನಿಯೋಗದಲ್ಲಿ BMZ ನ ಮಹಾನಿರ್ದೇಶಕಿ ಮಿಸ್ ಕ್ರಿಸ್ಟೀನ್ ಟೋಟ್ಝ್ಕೆ, ಮಿಸ್ ಬಾರ್ಬರಾ ಶಾಫರ್ ಮತ್ತು ಕ್ರಿಸ್ಟೋಫ್ ವಾನ್ ಸ್ಟೆಕೋವ್ ಉಪಸ್ಥಿತರಿದ್ದರು. ರೈಸ್ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ ಮತ್ತು GIZ ನ ಗ್ರೀನ್ ಅರ್ಬನ್ ಮೊಬಿಲಿಟಿ ಇನೋವೇಶನ್ ಮುಂದಾಳತ್ವದಲ್ಲಿ ವಿಸ್ತರಿಸಲ್ಪಟ್ಟ ಆನ್ಬೋರ್ಡ್ ವ್ಯವಸ್ಥೆಯ ಜಾರಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಯಿತು.
ಈ ಭೇಟಿಯ ಸಂದರ್ಭದಲ್ಲಿ, BMZ ನಿಯೋಗವು ಮೈಸೂರು ನಗರ ಬಸ್ಗಳಲ್ಲಿ ಕಾರ್ಯಾಚರಣೆಯಲ್ಲಿ ಇರುವ ಸಾಧನವನ್ನು ನೇರವಾಗಿ ಪರಿಶೀಲಿಸಿ ಎಲ್ಲ ವರ್ಗಗಳಿಗೂ ಅನುಕೂಲವಾಗುವ ಸಂಚಾರ ವ್ಯವಸ್ಥೆ ನಿರ್ಮಾಣದಲ್ಲಿನ ನಿಗಮದ ಬದ್ಧತೆಯನ್ನು ಕೊಂಡಾಡಿದರು. ಬಳಕೆದಾರ ಕೇಂದ್ರೀಕೃತ, ನವೀನ ಹಾಗೂ ಸುಲಭಪ್ರವೇಶದ mobility ಸಂಚಾರ ಪರಿಹಾರಗಳನ್ನು ಅಳವಡಿಸುವಲ್ಲಿ ನಿಗಮವು ತೋರಿದ ಆಸಕ್ತಿಯನ್ನು ಪ್ರಶಂಸಿಸಿ, ಮೈಸೂರು ನಗರ ಸಾರಿಗೆಯ ಈ ವ್ಯವಸ್ಥೆಯನ್ನು ಮುಂದುವರಿಸಿರುವುದಕ್ಕಾಗಿ ಅಭಿನಂದಿಸಿದರು.
ಭೇಟಿಯ ವೇಳೆ ಜರ್ಮನ್ ರಾಯಭಾರ ಕಚೇರಿ – ನವದೆಹಲಿಯ
ಗೊಟ್ಫ್ರೈಡ್ ವಾನ್ ಗೆಮಿಂಗನ್, ಪಾಮೇಲಾ ಬೈಜಲ್, ಜೋಹಾನ್ಸ್ ಶ್ನೈಡರ್, ಶೀನಂ ಪುರಿ, ಜಾಸ್ಮಿನ್ ಕೌರ್ ಹಾಗೂ ಜಿಐಝಡ್ ದೇಶ ನಿರ್ದೇಶಕಿ ಜುಲಿ ರೆವಿಯರ್ ಉಪಸ್ಥಿತರಿದ್ದರು.





















































