ಬೆಂಗಳೂರು: ರಾಜ್ಯ ಸರ್ಕಾರದ ಪ್ರತಿಷ್ಠಿತ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸಮಗ್ರ ಸಾರಿಗೆ ಸೌಲಭ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅನುದಾನ/ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಸಂಸ್ಥೆಯ ಅನುದಾನದ ಅಡಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅಗತ್ಯ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಗುರುವಾರ (ಜೂ.20) ನಡೆದ KKRTCಯ ಮಂಡಳಿ ಸಭೆಯಲ್ಲಿ ಸಾರಿಗೆ ಸಚಿವರು ಹಾಗೂ ಅಧ್ಯಕ್ಷರು ಕೆ ಕೆ ಆರ್ ಟಿ ಸಿ ರವರು, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಹೊಸ ಬಸ್ಸುಗಳು, ಡಿಜಿಟಲ್ ಟಿಕೇಟ್ ಯಂತ್ರಗಳು (ಅ್ಯಡ್ರಾಯಡ್ ಆದಾರಿತ) ಹಾಗೂ ಹಲವು ಬಸ್ ನಿಲ್ದಾಣಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (KKRTC) ನಿಗಮಕ್ಕೆ 2024 -2025 ಸಾಲಿನಲ್ಲಿ ವಿವಿಧ ಮಾದರಿಯ 330 ಬಸ್ ಗಳನ್ನು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯ ಪಡೆದು ಖರೀದಿಸಲು ನಿರ್ಧರಿಸಲಾಯಿತು. ಹಾಗೂ ನಿಗಮದಲ್ಲಿ 6500 ಆಂಡ್ರಾಯ್ಡ್ ಆಧರಿತ ವಿದ್ಯುತ್ಮಾನ ಟಿಕೆಟ್ ವಿತರಣೆ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಸದರಿ ಯಂತ್ರಗಳಿಂದ ಪ್ರಯಾಣಿಕರು ಡಿಜಿಟಲ್ ಪೇಮೆಂಟ್ ಮುಖಾಂತರ ಹಣ ಪಾವತಿ (UPI, Cards ) ಮಾಡಿ ಟಿಕೆಟ್ ಪಡೆಯಬಹುದಾಗಿದೆ. ಇದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
KKRTC ವ್ಯಾಪ್ತಿಯಲ್ಲಿ ಉದ್ದೇಶಿತ 17 ಬಸ್ ನಿಲ್ದಾಣಗಳ ಕಾಮಗಾರಿ- (5741.84 ಲಕ್ಷ ರೂ ವೆಚ್ಚ) ವಿವರ:
ಬೇವೂರದಲ್ಲಿ ರೂ 450 ಲಕ್ಷ ವೆಚ್ಚದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ತಲಕಲ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರ ರೂ.600.00 ಲಕ್ಷ ವೆಚ್ಚದಲ್ಲಿ29 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಸಂಕನೂರ ಕ್ರಾಸ್ ಬಳಿ ರೂ.320.23 ಲಕ್ಷ ವೆಚ್ಚದಲ್ಲಿ 24 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಬನ್ನಿಕೊಪ್ಪದಲ್ಲಿ ರೂ.221.61 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಹೀರೆವಂಕಲಕುಂಟಾದಲ್ಲಿ ರೂ. 300.00 ಲಕ್ಷ ವೆಚ್ಚದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಬಂಡಿ ಕ್ರಾಸ್ ಬಳಿ ರೂ. 300.00ಲಕ್ಷ ವೆಚ್ಚದಲ್ಲಿ 21 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಕುದರೆಮೊತಿಯಲ್ಲಿ ರೂ.300.00 ಲಕ್ಷ ವೆಚ್ಚದಲ್ಲಿ 23 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಇಟಗಿಯಲ್ಲಿ ರೂ.400.00 ಲಕ್ಷ ವೆಚ್ಚದಲ್ಲಿ 24 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ರಾಜೂರ ಅಡುರದಲ್ಲಿ ರೂ. 300.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಕುಕನೂರ ತಾಲೂಕಿನ ಬೆಣಕಲ್ಲ ದಲ್ಲಿ ರೂ.200 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಕುಕನೂರ ತಾಲೂಕಿನ ಮಂಡಲಗೇರಿಯಲ್ಲಿ ರೂ.200 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಕುಕನೂರ ತಾಲೂಕಿನ ಹಿರೇಮ್ಯಾಗೇರಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಕುಕನೂರ ತಾಲೂಕಿನ ಮುರಡಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಕುಕನೂರ ತಾಲೂಕಿನ ಹಿರೇ ಅರಳಿಹಳ್ಳಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಕುಕನೂರ ತಾಲೂಕಿನ ಗಾಣದಾಳದಲ್ಲಿ 200 ಲಕ್ಷ ರೂ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,
ಮಾನವಿ (ರಾಯಚೂರು) ಬಳಿ ರೂ. 950 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಹಾಗೂ ಹುಲಸೂರ ಜಿಲ್ಲೆ ಬೀದರ್ ನಲ್ಲಿ ರೂ 400 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ಕಾಮಗಾರಿ.