ನವದೆಹಲಿ: ಲೋಕಸಭಾ ಫಲಿತಾಂಶದ ನಂತರ ಬರೋಬ್ಬರಿ ರಾಜ್ಯಸಭಾ ಸದಸ್ಯ ಸ್ಥಾನಗಳು ತೆರವಾಗಿವೆ. ಲೋಕಸಭೆ ಚುನಾವಣೆಯಲ್ಲಿ ಹಲವು ಸಂಸದರು ಸ್ಪರ್ಧಿಸಿ ಜಯಗಳಿಸಿರುವುದರಿಂದ ಅವರ ರಾಜ್ಯಸಭಾ ಸ್ಥಾನ ರದ್ದಾಗಿದೆ.
ರಾಜ್ಯಸಭಾ ಕಾರ್ಯಾಲಯದ ಅಧಿಕಾರಿಗಳ ಪ್ರಕಾರ ಮಹಾರಾಷ್ಟ್ರ, ಅಸ್ಸಾಂ, ಬಿಹಾರ ರಾಜ್ಯಗಳಲ್ಲಿ ತಲಾ ಎರಡು, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ತ್ರಿಪುರಾ ರಾಜ್ಯಗಳಲ್ಲಿ ತಲಾ ಒಂದು ಸ್ಥಾನ ಸದ್ಯ ಖಾಲಿಯಾಗಿವೆ.
ಅಸ್ಸಾಂನಲ್ಲಿ ಕಾಮಕ್ಯ ಪ್ರಸಾದ್ ತಾಸಾ, ಸರ್ಬಾನಂದ ಸೋನಾವಾಲ್, ಬಿಹಾರದಲ್ಲಿ ಮೀಸಾ ಭಾರತಿ, ವಿವೇಕ್ ಠಾಕೂರ್, ಹರಿಯಾಣದಲ್ಲಿ ದೀಪೆಂದರ್ ಸಿಂಗ್ ಹೂಡಾ, ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಎಂ. ಸಿಂದಿಯಾ, ಮಹಾರಾಷ್ಟ್ರದಲ್ಲಿ ಉದಯನ್ರಾಜೆ ಭೋಸ್ಥೆ, ಪೀಯೂಷ್ ಗೋಯಲ್, ರಾಜಸ್ಥಾನದಲ್ಲಿ ಕೆ.ಸಿ. ವೇಣುಗೋಪಾಲ್, ತ್ರಿಪುರಾದಲ್ಲಿ ವಿಪ್ಲಬ್ ಕುಮಾರ್ ದೇವ್ ಅವರ ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ.