ನವದೆಹಲಿ; ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು 72 ಸಚಿವರ ಸಂಪುಟ ಭಾನುವಾರ ರಚನೆಯಾಗಿದೆ. ಸೋಮವಾರ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ನೂತನ ಸಚಿವರ ಖಾತೆಗಳ ಹಂಚಿಕೆ ವಿವರ ಹೀಗಿದೆ;
- ರಾಜನಾಥ್ ಸಿಂಗ್: ರಕ್ಷಣೆ
- ಅಮಿತ್ ಶಾ : ಗೃಹ; ಸಹಕಾರ.
- ನಿತಿನ್ ಜೈರಾಮ್ ಗಡ್ಕರಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ.
- ಜಗತ್ ಪ್ರಕಾಶ್ ನಡ್ಡಾ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ.
- ಶಿವರಾಜ್ ಸಿಂಗ್ ಚೌಹಾಣ್ : ಕೃಷಿ ಮತ್ತು ರೈತರ ಕಲ್ಯಾಣ; ಗ್ರಾಮೀಣಾಭಿವೃದ್ಧಿ.
- ನಿರ್ಮಲಾ ಸೀತಾರಾಮನ್ : ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ.
- ಡಾ. ಸುಬ್ರಹ್ಮಣ್ಯಂ ಜೈಶಂಕರ್ : ವಿದೇಶಾಂಗ ವ್ಯವಹಾರ.
- ಮನೋಹರ್ ಲಾಲ್ ಖಟ್ಟರ್ : ವಸತಿ ಮತ್ತು ನಗರ ವ್ಯವಹಾರ, ವಿದ್ಯುತ್.
- ಎಚ್.ಡಿ.ಕುಮಾರಸ್ವಾಮಿ: ಕೈಗಾರಿಕೆ, ಉಕ್ಕು.
- ಪಿಯೂಷ್ ಗೋಯಲ್: ವಾಣಿಜ್ಯ ಮತ್ತು ಕೈಗಾರಿಕೆ.
- ಧರ್ಮೇಂದ್ರ ಪ್ರಧಾನ್ : ಶಿಕ್ಷಣ,
- ಜಿತನ್ ರಾಮ್ ಮಾಂಝಿ : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ.
- ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) : ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ.
- ಸರ್ಬಾನಂದ ಸೋನೋವಾಲ್ : ಬಂದರು, ಹಡಗು ಮತ್ತು ಜಲಸಾರಿಗೆ.
- ವೀರೇಂದ್ರ ಕುಮಾರ್ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- ಕಿಂಜರಾಪು ರಾಮಮೋಹನ್ ನಾಯ್ಡು : ನಾಗರಿಕ ವಿಮಾನಯಾನ.
- ಪ್ರಲ್ಹಾದ್ ಜೋಶಿ : ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ.
- ಜುಯಲ್ ಓರಮ್ : ಬುಡಕಟ್ಟು ವ್ಯವಹಾರ
- ಗಿರಿರಾಜ್ ಸಿಂಗ್ : ಜವಳಿ.
- ಅಶ್ವಿನಿ ವೈಷ್ಣವ್ : ರೈಲ್ವೆ, ಮಾಹಿತಿ ಮತ್ತು ಪ್ರಸಾರ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.
- ಜ್ಯೋತಿರಾದಿತ್ಯ ಎಂ. ಸಿಂಧಿಯಾ: ಸಂಪರ್ಕ, ಈಶಾನ್ಯ ಪ್ರದೇಶ ಅಭಿವೃದ್ಧಿ.
- ಭೂಪೇಂದರ್ ಯಾದವ್ : ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ.
- ಗಜೇಂದ್ರ ಸಿಂಗ್ ಶೇಖಾವತ್ : ಸಂಸ್ಕೃತಿ, ಪ್ರವಾಸೋದ್ಯಮ.
- ಅನ್ನಪೂರ್ಣ ದೇವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,
- ಕಿರಣ್ ರಿಜಿಜು : ಸಂಸದೀಯ ವ್ಯವಹಾರ, ಅಲ್ಪಸಂಖ್ಯಾತ ವ್ಯವಹಾರ.
- ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
- ಮನ್ಸುಖ್ ಮಾಂಡವಿಯಾ : ಕಾರ್ಮಿಕ ಮತ್ತು ಉದ್ಯೋಗ, ಯುವ ವ್ಯವಹಾರ ಮತ್ತು ಕ್ರೀಡೆ.
- ಜಿ.ಕಿಶನ್ ರೆಡ್ಡಿ : ಕಲ್ಲಿದ್ದಲು ಸಚಿವ; ಗಣಿ.
- ಚಿರಾಗ್ ಪಾಸ್ವಾನ್ : ಆಹಾರ ಸಂಸ್ಕರಣಾ ಕೈಗಾರಿಕೆ.
- ಸಿ.ಆರ್. ಪಾಟೀಲ್ : ಜಲಶಕ್ತಿ.
Portfolio for PM Modi-led Union Cabinet announced
Amit Shah, Rajnath Singh, Nitin Gadkari, Nirmala Sitharaman, Dr S Jaishankar Piyush Goyal and Ashwini Vaishnaw retain their ministries. pic.twitter.com/LkZ0MQiTnk
— ANI (@ANI) June 10, 2024
ರಾಜ್ಯ ಖಾತೆಗಳನ್ನೂ ಹಂಚಿಕೆ ಮಾಡಲಾಗಿದ್ದು ವಿ.ಸೋಮಣ್ಣ ಅವರಿಗೆ ರೈಲ್ವೇ ಖಾತೆಯ ಹೊಣೆ ವಹಿಸಲಾಗಿದೆ.
ರಾಜ್ಯ ಸಚಿವರ ಖಾತೆಗಳು:
- ರಾವ್ ಇಂದರ್ಜಿತ್ ಸಿಂಗ್ (ಸ್ವತಂತ್ರ ಉಸ್ತುವಾರಿ): ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ, ಯೋಜನೆ, ಸಂಸ್ಕೃತಿ.
- ಡಾ. ಜಿತೇಂದ್ರ ಸಿಂಗ್ (ಸ್ವತಂತ್ರ): ವಿಜ್ಞಾನ ಮತ್ತು ತಂತ್ರಜ್ಞಾನ , ಭೂ ವಿಜ್ಞಾನ, ಪ್ರಧಾನಿ ಕಚೇರಿಯಲ್ಲಿ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ, ಬಾಹ್ಯಾಕಾಶ ಇಲಾಖೆ.
- ಅರ್ಜುನ್ ರಾಮ್ ಮೇಘವಾಲ್ (ಸ್ವತಂತ್ರ): ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರ.
- ಜಾಧವ್ ಪ್ರತಾಪ್ರಾವ್ ಗಣಪತ್ರಾವ್ (ಸ್ವತಂತ್ರ): ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
- ಜಯಂತ್ ಚೌಧರಿ (ಸ್ವತಂತ್ರ): ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ, ಶಿಕ್ಷಣ.
- ಜಿತಿನ್ ಪ್ರಸಾದ್ –?: ವಾಣಿಜ್ಯ ಮತ್ತು ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.
- ಶ್ರೀಪಾದ್ ಯೆಶೋ ನಾಯಕ್: ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ.
- ಪಂಕಜ್ ಚೌಧರಿ : ಹಣಕಾಸು.
- ಕ್ರಿಶನ್ ಪಾಲ್ : ಸಹಕಾರ.
- ರಾಮದಾಸ್ ಅಠವಳೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.
- ರಾಮ್ ನಾಥ್ ಠಾಕೂರ್ : ಕೃಷಿ ಮತ್ತು ರೈತರ ಕಲ್ಯಾಣ.
- ನಿತ್ಯಾನಂದ ರಾಯ್ : ಗೃಹ.
- ಅನುಪ್ರಿಯಾ ಪಟೇಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕಗಳು ಮತ್ತು ರಸಗೊಬ್ಬರ.
- ವಿ.ಸೋಮಣ್ಣ: ಜಲಶಕ್ತಿ, ರೈಲ್ವೇ.
- ಚಂದ್ರಶೇಖರ್ ಪೆಮ್ಮಸಾನಿ: ಗ್ರಾಮೀಣಾಭಿವೃದ್ಧಿ, ಸಂವಹನ.
- ಪ್ರೊ. ಎಸ್.ಪಿ. ಸಿಂಗ್ ಬಾಘೇಲ್: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಪಂಚಾಯತ್ ರಾಜ್.
- ಶೋಭಾ ಕರಂದ್ಲಾಜೆ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ, ಕಾರ್ಮಿಕ ಮತ್ತು ಉದ್ಯೋಗ.
- ಕೀರ್ತಿವರ್ಧನ್ ಸಿಂಗ್: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ವಿದೇಶಾಂಗ ವ್ಯವಹಾರ.
- ಬಿ.ಎಲ್.ವರ್ಮಾ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.
- ಶಂತನು ಠಾಕೂರ್: ಬಂದರು, ಹಡಗು ಮತ್ತು ಜಲಮಾರ್ಗ.
- ಸುರೇಶ್ ಗೋಪಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರವಾಸೋದ್ಯಮ.
- ಡಾ. ಎಲ್. ಮುರುಗನ್: ಮಾಹಿತಿ ಮತ್ತು ಪ್ರಸಾರ, ಸಂಸದೀಯ ವ್ಯವಹಾರ.
- ಅಜಯ್ ತಮ್ತಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿ.
- ಬಂಡಿ ಸಂಜಯ್ ಕುಮಾರ್ : ಗೃಹ.
- ಕಮಲೇಶ್ ಪಾಸ್ವಾನ್: ಗ್ರಾಮೀಣಾಭಿವೃದ್ಧಿ.
- ಭಗೀರಥ ಚೌಧರಿ: ಕೃಷಿ, ರೈತರ ಕಲ್ಯಾಣ.
- ಸತೀಶ್ ಚಂದ್ರ ದುಬೆ : ಕಲ್ಲಿದ್ದಲು, ಗಣಿ.
- ಸಂಜಯ್ ಸೇಠ್ : ರಕ್ಷಣೆ.
- ರವನೀತ್ ಸಿಂಗ್: ಆಹಾರ ಸಂಸ್ಕರಣಾ ಕೈಗಾರಿಕೆ, ರೈಲ್ವೇ.
- ದುರ್ಗಾದಾಸ್ ಯುಕೆ: ಬುಡಕಟ್ಟು ವ್ಯವಹಾರ.
- ರಕ್ಷಾ ನಿಖಿಲ್ ಖಡ್ಸೆ: ಯುವ ವ್ಯವಹಾರ ಮತ್ತು ಕ್ರೀಡೆ.
- ಸುಕಾಂತ ಮಜುಂದಾರ್ : ಶಿಕ್ಷಣ, ಈಶಾನ್ಯ ಪ್ರದೇಶದ ಅಭಿವೃದ್ಧಿ.
- ಸಾವಿತ್ರಿ ಠಾಕೂರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ.
- ತೋಖಾನ್ ಸಾಹು: ವಸತಿ ಮತ್ತು ನಗರ ವ್ಯವಹಾರ.
- ರಾಜ್ ಭೂಷಣ್ ಚೌಧರಿ : ಜಲಶಕ್ತಿ.
- ಭೂಪತಿ ರಾಜು ಶ್ರೀನಿವಾಸ ವರ್ಮಾ : ಭಾರೀ ಕೈಗಾರಿಕೆ, ಉಕ್ಕು.
- ಹರ್ಷ್ ಮಲ್ಹೋತ್ರಾ : ಕಾರ್ಪೊರೇಟ್ ವ್ಯವಹಾರ. ರಸ್ತೆ ಸಾರಿಗೆ ಮತ್ತು ಹೆದ್ದಾರಿ.
- ನಿಮುಬೆನ್ ಜಯಂತಿಭಾಯ್ ಬಂಬಾನಿಯಾ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ.
- ಮುರಳೀಧರ್ ಮೊಹೋಲ್: ಸಹಕಾರ, ನಾಗರಿಕ ವಿಮಾನಯಾನ.
- ಜಾರ್ಜ್ ಕುರಿಯನ್: ಅಲ್ಪಸಂಖ್ಯಾತ ವ್ಯವಹಾರ, ಮತ್ತುಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ.
- ಪಬಿತ್ರಾ ಮಾರ್ಗರಿಟಾ: ವಿದೇಶಾಂಗ ವ್ಯವಹಾರ, ಜವಳಿ.