ಮಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕ್ಲೈಮ್ಯಾಕ್ಸ್ ಘಟ್ಟದಲ್ಲಿರುವಾಗ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತನ್ನು ನಡೆಸಿದೆ. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಸ್ಪರ್ಧಿಸಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಬಿಜೆಪಿ ಕುತೂಹಲಕಾರಿ ಕಾರ್ಯತಂತ್ರ ರೂಪಿಸಿದೆ. ಮಹಿಳೆಯರು ತಲಾ 9 ಮಂದಿಯ ತಂಡಗಳ ಮೂಲಕ ಮತಗಟ್ಟೆಗೆ ತೆರಳುವ ರೀತಿಯ ಸನ್ನಿವೇಶ ಸೃಷ್ಟಿಸಲು ಪ್ರಯತ್ನ ಮಾಡಿದೆ. ಈ ಬಾರಿಯ ಚುನಾವಣಾ ಧರ್ಮಯುದ್ಧವಾಗಿದ್ದು ಮಹಿಳೆಯರು ನವದುರ್ಗೆಯರ ಅವತಾರದಲ್ಲಿ ಮತಅಸ್ತ್ರ ಪ್ರಯೋಗಿಸುವ ಪರಿಕಲ್ಪನೆ ಇದಾಗಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ನಾಯರ ಟೀಕೆ:
ಬಿಜೆಪಿ ನಾಯಕರ ಈ ಪ್ರಯತ್ನದ ಬಗ್ಗೆ ಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಮಹಿಳೆಯರನ್ನು ಎಲ್ಲಾ ರೀತಿಯಲ್ಲೂ ದುರ್ಗೆಯರನ್ನಾಗಿ ಕಾಣಬೇಕೇ ಹೊರತು, ಕೇವಲ ಮತ ಚಲಾಯಿಸಲಷ್ಟೇ ಅವರನ್ನು ದೇವರನ್ನಾಗಿ ಕಾಣುವುದಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಜಿ.ಎ.ಬಾವಾ ಪ್ರತಿಪಾದಿಸಿದ್ದಾರೆ. ಮಂಗಳೂರಿನಲ್ಲಿ ಪ್ರೇತಿಕ್ರಿಯಿಸಿರುವ ಅವರು, ಮಹಿಳೆಯರನ್ನು ನವದಯರ್ಗೆಯರನ್ನಾಗಿ ಕಾಣುವುದು ಸಂತಸದ ವಿಚಾರ, ಅದರಂತೆ ಕೆಲವು ಪ್ರಕರಣಗಳಲ್ಲಿ ಸಂತ್ರಸ್ತರಾದವರಲ್ಲೂ ದೇವರಂತೆ ಕಾಣಬೇಕಲ್ಲವೇ ಎಂದು ಕುಟುಕಿದ್ದಾರೆ.
ಮಹಿಳೆಯರನ್ನು ಎರಡನೇ ದರ್ಜೆಯ ವ್ಯಕ್ತಿಗಳನ್ನಾಗಿ ಕಾನುವ ಬಿಜೆಪಿ ಈವರೆಗೂ ಮಹಿಳೆಯರಿಗಾಗಿ ಯಾವುದಾದರೂ ಕಾನೂನನ್ನು ಜಾರಿಗೆ ತಂದಿದೆಯೇ ಎಂದು ಪ್ರಶ್ನಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯೂ ಆಗಿರುವ ಜಿ.ಎ.ಬಾವಾ, ಅಂಬೇಡ್ಕರ್ ಅವರು ಮಹಿಳೆಯರಿಗೆ ಪ್ರಾತಿನಿದ್ಯ ನೀಡಬೇಕೆಂದು ಪ್ರತಿಪಾದಿಸಿದ್ದನ್ನು ನೆನಪಿಸಿದರೆ, ಬಿಜೆಪಿಯವರು ಮನುಸ್ಮೃತಿ ಜಾರಿಗೆ ತರುವ ಪ್ರಭಾವ ಬೀರುತ್ತಾರೆ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರು ಶಾಸಕಾಂಗದಲ್ಲಿ ಮಹಿಳೆಯರಿಗೆ 33% ಮೀಸಲಾತಿ ತರಲು ಮುಂದಾದಾಗ ಅದನ್ನು ವಿರೋಧಿಸಿದ್ದೇ ಬಿಜೆಪಿ. ಆದರೂ ಕಾಂಗ್ರೆಸ್ ಸರ್ಕಾರಗಳು ಮಹಿಳೆಯರ ಪರವಾಗಿಯೇ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಹೆಣ್ಣುಮಕ್ಜಳಿಗೆ ಎಲ್ಲಾ ಹಕ್ಕುಗಳನ್ನು ದೊರಕಿಸಿಕೊಟ್ಟಿರುವುದು ಕಾಂಗ್ರೆಸ್ ಸರ್ಕಾರ. ಕಾರ್ಖಾನೆಗಳಲ್ಲಿ ಮಹಿಳೆಯರ ಹಿತ ಕಾಪಾಡಲು ನೋಡಲ್ ಅಧಿಕಾರಿ ನೇಮಕಕ್ಕೆ ನಿಯಮ ಜಾರಿಗೆ ತಂದಿದ್ದೂ ಕಾಂಗ್ರೆಸ್, ಆದರೆ ಇಷ್ಟೂ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಹಿಳೆಯರ ಪರವಾಗಿ ಕಾನೂನು ಜಾರಿಗೆ ತರುವುದು ಬಿಡಿ, ಕನಿಷ್ಠ ಪಕ್ಷ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗಲೂ ಮೌನವಹಿಸಿದ್ದಾರಲ್ಲವೇ ಎಂದು ಪ್ರಶ್ನಿಸಿದರು.
ದೇಶದ ಹಲವೆಡೆ ಮಹಿಳೆಯರನ್ಬು ಬೆತ್ತಲೆ ಮಾಡಿದ ಪ್ರಕರಣಗಳ ಬಗ್ಗೆ ಪ್ರಧಾನಿ ಮೋದಿಯವರು ಮೌನವಹಿಸಿದ್ದು ಯಾಕೆ? ಕುಸ್ತಿ ಪಟುಗಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಕ್ರೀಡಾಪಟುಗಳಿಗೆ ನ್ಯಾಯ ದೊರಕಿಸಿಕೊಟ್ಟಿಲ್ಲವೇಕೆ? ಮಹಿಳೆಯರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಯ ಭರವಸೆ ನೀಡಿದಾಗ ವಿರೋಧಪಡಿಸಿದ್ದೇಕೆ? ಗ್ಯಾರೆಂಟಿ ಯೋಜನೆಯಿಂದ ಮಹಿಳೆಯರು ದಾರಿತಪ್ಪಿದ್ದಾರೆ ಎಂಬ ಟೀಕೆ ವ್ಯಕ್ತವಾದಾಗ ಅದಕ್ಕೆ ಆಕ್ಷೇಪಿಸದೇ ಇದ್ದುದು ಬಿಜೆಪಿಯರಲ್ಲವೇ? ಬಿಜೆಪಿಯವರು ಲೈಂಗಿಕ ಕಿರಿಕುಳ ನೀಡಿದರೆ ಅಪರಾಧವೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿರುವವರೂ ನೀವಲ್ಲವೇ? ಎಂದು ಜಿ.ಎ.ಬಾವಾ ಅವರು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.
ಮಹಿಳೆಯರಿಗೆ ಆಗಿರುವ ಅನ್ಯಾಯವನ್ನು ಕಂಡರೂ ಮೌನವಾಗಿ, ಮನುವಾದಿಯಂತಿರುವ ಬಿಜೆಪಿಯವರು ಈಗ ಮಹಿಳೆಯರ ಮತಗಳು ತಪ್ಪಿಹೋಗುವ ಆತಂಕ ಎದುರಾದಾಗ ಮಾತ್ರ ಮಹಿಳೆಯರನ್ನು ನವದುರ್ಗೆಯರನ್ನಾಗಿ ಬಿಂಬಿಸಲು ಹೊರಟಿದ್ದಾರೆ ಎಂದು ಜಿ.ಎ.ಬಾವಾ ಅವರು ಕಮಲ ಕಾರ್ಯಕರ್ತರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.