ದ್ವಾರಕಾ: ಮುಳುಗಿರುವ ದ್ವಾರಕಾ ಅವಶೇಷಗಳಿಗೆ ನಮನ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾಹಸ ನಡೆಸಿ ಗಮನಸೆಳೆದರು. ಪುರಾತನ ನಗರ ದ್ವಾರಕಾವು ಶ್ರೀಕೃಷ್ಣನ ಪುರಾಣ ಕಥೆಗೆ ಹೆಣೆದುಕೊಂಡಿದೆ, ಇದು ಭಾರತದ ಐತಿಹಾಸಿಕ ಶ್ರೀಮಂತಿಕೆ ಮತ್ತು ಆಧ್ಯಾತ್ಮಿಕ ಸಾರಕ್ಕೆ ಸಾಕ್ಷಿಯಾಗಿದೆ.
ದ್ವಾರಕಾದ ನೀರೊಳಗಿನ ಅವಶೇಷಗಳತ್ತ ಪ್ರಧಾನಿ ಮೋದಿಯವರ ಪ್ರಯಾಣ ಕುತೂಹಲದ ಕೇಂದಬಿಂದುವಾಯಿತು. ಮುಳುಗಿದ ಅವಶೇಷಗಳ ನಡುವೆ, ಅವರು ಭೂಮಿ ಮತ್ತು ಅದರ ಆಧ್ಯಾತ್ಮಿಕ ಪರಂಪರೆಯ ನಡುವಿನ ನಿರಂತರ ಸಂಪರ್ಕವನ್ನು ಸಂಕೇತಿಸುವ ಪ್ರಾರ್ಥನೆ ಮತ್ತು ಗೌರವವನ್ನು ನೀಡಿದರು ಎಂದು ಮೂಲಗಳು ಹೇಳಿಕೊಂಡಿವೆ.
To pray in the city of Dwarka, which is immersed in the waters, was a very divine experience. I felt connected to an ancient era of spiritual grandeur and timeless devotion. May Bhagwan Shri Krishna bless us all. pic.twitter.com/yUO9DJnYWo
— Narendra Modi (@narendramodi) February 25, 2024