ದೊಡ್ಡಬಳ್ಳಾಪುರ: ನಗರದ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಅಳವಡಿಸಿದ್ದ ಏರ್ ಬಲೂನ್ ಜಾರುಬಂಡಿಯಲ್ಲಿ ಆಟವಾಡುವಾಗ ನಿತ್ರಾಣಗೊಂಡ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಶಾಂತಿನಗರದ ನಿವಾಸಿ ಮಂಜುನಾಥ್ (ವಡೆ ಮಂಜು) ಅವರ ಪುತ್ರ ಶ್ರೇಯಸ್ (11) ಮೃತ ಬಾಲಕ. ದೇವಸ್ಥಾನದ ಮುಂದೆ ಮನರಂಜನಾ ಆಟದ ಸಾಮಗ್ರಿಗಳನ್ನು ಅಳವಡಿಸಿದ್ದು, ಮಕ್ಕಳಿಗಾಗಿ ಏರ್ ಬಲೂನ್ ಗಳ ಆಟ ಇಡಲಾಗಿತ್ತು. ಶ್ರೇಯಸ್ ಆರಾಧ್ಯ ಏರ್ ಬಲೂನ್ ನಲ್ಲಿ ನಿರ್ಮಿಸಿದ್ದ ಜಾರುಬಂಡಿ ಮೇಲಿಂದ ಜಾರುವಾಗ ನಿತ್ರಾಣಗೊಂಡಿದ್ದಾನೆ, ಕೆಳಗೆ ಬರುವಷ್ಟರಲ್ಲಿ ಎದೆ ನೋವು ಎಂದು ಕುಸಿದು ಬಿದ್ದಿದ್ದಾನೆ. ಕೂಡಲೇ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಬಾಲಕನ ಉಸಿರು ನಿಂತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.