ಮಂಗಳೂರು: ತುಳು ನಾಡು-ನುಡಿಗಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ತುಳುನಾಡಿನ ಮಂದಿ ತಿರುಗಿಬಿದ್ದಿದ್ದಾರೆ. ಸಚಿವ ಸುನಿಲ್ ಕುಮಾರ್ ವಿರುದ್ದ ಸಿಟ್ಟು ಹೊರಹಾಕುತ್ತಿದ್ದಾರೆ. ರಾಜ್ಯದ ಬೊಮ್ಮಾಯಿ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿರುವ ಕರಾವಳಿಯ ಜನರೀಗ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟು ಅಭಿಯಾನ ಕೈಗೊಂಡಂತಿದೆ.
ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವದ ಕಂಪು ಆವರಿಸಿದರೆ ತುಳು ಭಾಷಿಗರ ಪ್ರಾಬಲ್ಯವಿರುವ ಕರಾವಳಿ ಜಿಲ್ಲೆಗಳ ಜನರು ಕರಾಳ ದಿನಾಚರಣೆಯನ್ನು ಪ್ರತಿಪಾದಿಸಿದ್ದಾರೆ. ಇದು ಸ್ಥಳೀಯ ಜನಪ್ರತಿನಿಧಿಗಳ ಮೇಲಿನ ಸಿಟ್ಟಲ್ಲದೆ ಬೇರೇನೂ ಅಲ್ಲ.
ನಾ ಹೇಗೆ ಆಚರಿಸಲಿ ಕರ್ನಾಟಕ ರಾಜ್ಯೋತ್ಸವವ ನನ್ನಯ ತುಳು ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ಸಿಗದೆ ಇದ್ದಾಗ.
ನನಗೂ ಆಸೆಯಿದೆ ಕರ್ನಾಟಕ ರಾಜ್ಯೋತ್ಸವವ ಆಚರಿಸಲು, ಅದು ತುಳು ರಾಜ್ಯ ಭಾಷೆಯಾದಾಗ.
ಆಚರಣೆಗಳು ಹೃದಯದಿಂದ ಇರಬೇಕೆ ಹೊರತು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಲ್ಲ.#KarnatakaRajyotsava
— Sudarshan Shetty 🇮🇳 (@Sudarshanshty) November 1, 2022
ತುಳು ಭಾಷೆಗೆ ಪ್ರಾತಿನಿದ್ಯ ಸಿಗಬೇಕೆಂಬುದು ಕರಾವಳಿ ಜನರ ಆಗ್ರಹ. ರಾಜ್ಯದ ಪ್ರಮುಖ ಭಾಷೆಗಳಾದ ತುಳು ಹಾಗೂ ಕೊಡವ ಭಾಷೆಗಳಿಗೆ ಸರ್ಕಾರದ ತಾರತಮ್ಯ ನೀತಿಂದಾಗಿ ಅನ್ಯಾಯವಾಗುತ್ತಿದೆ ಎಂಬುದೇ ಈ ಆಗ್ರಹದ ಹಿಂದಿರುವ ನೋವು. ಕರ್ನಾಟಕಕ್ಕೆ ಹೊಂದಿಕೊಂಡಂತಿರುವ ತುಳುನಾಡಿನಲ್ಲೀಗ ಸಂಸದರೆಲ್ಲರೂ ಬಿಜೆಪಿಯವರೇ ಇದ್ದಾರೆ. ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳ 14 ಶಾಸಕರ ಪೈಕಿ ಒಬ್ಬರನ್ನು ಹೊರತುಪಡಿಸಿ ಇನ್ನುಳಿದವರೆಲ್ಲರೂ ಆಡಳಿತ ಪಕ್ಷಕ್ಕೆ ಸೇರಿದವರು. ಕೇಂದ್ರ-ರಾಜ್ಯಗಳಲ್ಲಿರುವ ಸರ್ಕಾರಗಳ ಪ್ರತಿನಿಧಿಗಳೇ ಪ್ರಾಬಲ್ಯವಿದ್ದರೂ ಈ ಶಾಸಕರು-ಸಂಸದರು ತುಳುವರ ಆಗ್ರಹಕ್ಕೆ ಧ್ವನಿಗೂಡಿಸದಿರುವುದೇ ನೋವಿನ ಸಂಗತಿ. ಹಾಗಾಗಿಯೇ ಇಂತಹ ಜನಪ್ರತಿನಿಧಿಗಳು ಇದ್ದರೆಷ್ಟು, ತೊಲಗಿದರೆಷ್ಟು ಎಂಬ ಆಕ್ರೋಶ ತುಳು ಹೋರಾಟಗಾರರಿಂದ ವ್ಯಕ್ತವಾಗುತ್ತಿದೆ. ಅದರಲ್ಲೂ ರಾಜ್ಯದ ಆಡಳಿತ ನಡೆಸುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರೇ ಕರಾವಳಿಯ ಸಂಸದರಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾರೆ. ಈ ಇಬ್ಬರು ನಾಯಕರು ಇಚ್ಚಾಶಕ್ತಿ ಪ್ರದರ್ಶಿಸಿದ್ದರೆ, ಅವರಿಗೆ ಕರಾವಳಿ ಬಿಜೆಪಿಯ ಇನ್ನುಳಿದ ಶಾಸಕರು ಬೆಂಬಲ ಸೂಚಿಸಿದ್ದರೆ ತುಳು ಭಾಷೆಗೆ ನ್ಯಾಯಸಿಗುತ್ತಿತ್ತು ಎಂಬುದು ಹಲವರ ವಾದ. ಆದರೆ ಈ ನಾಯಕರಿಂದ ತುಳು ನುಡಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಆ ಭಾಗದ ಪ್ರಜ್ಞಾವಂತರ ಅಭಿಪ್ರಾಯ. ಈ ವಿಚಾರವೇ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿರುವುದು.
#TuluOfficialInKA_KL
Today the day Tulunad got devided between 2 different state. Kasrod in kerala, udupi/mangalore in Karnataka.#BlackDayForTulunad pic.twitter.com/HVSVs5SlFG— Sharath Kodavoor (@SharathTulunad) November 1, 2022
ಇದೀಗ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ತುಳು ಭಾಷಿಗರ ಬಗ್ಗೆ ಒಲವುಳ್ಳವರಿಂದ ಭಾರೀ ಆಂದೋಲನ ಆರಂಭವಾಗಿದೆ. ತುಳು ಭಾಷೆಗೆ ನ್ಯಾಯ ಸಿಗುವವರೆಗೂ ಕನ್ನಡ ರಾಜ್ಯೋತ್ಸವ ಆಚರಿಸುವುದಿಲ್ಲ ಎಂಬ ಘೋಷಣೆಯೂ ಸಾಮಾಜಿಕ ಜಾಲತಾಣಗಳಲ್ಲಿ ಮೊಳಗಿವೆ. ಈ ಹೋರಾಟವು ಕನ್ನಡ ಭಾಷೆಯ ವಿರುದ್ಧವಲ್ಲ, ತುಳು ಭಾಷೆಯನ್ನು ನಿರ್ಲಕ್ಷಿಸಿರುವ ಸರ್ಕಾರದ ವಿರುದ್ದ ಎಂಬ ಸ್ಪಷ್ಟನೆಯ ಪೋಸ್ಟ್ಗಳೂ ಪ್ರತಿಬಿಂಬಿಸಿವೆ..
I will start celebrating state hood day only when state starts celebrating my language …till then #Nov1 will be #BlackDayForTulunad #TulunadState pic.twitter.com/BQXZr3hgOA
— തുളു രാജ്യൊ /तुळु राज्य (@drsudhirn) November 1, 2022
1956ರಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದ ಸಂದರ್ಭದಲ್ಲಿ ಮರಾಠಿ, ತೆಲುಗು, ತಮಿಳು, ಮಲಯಾಳಂ ಸಹಿತ ವಿವಿಧ ಭಾಷೆಗಳ ಪ್ರಾಬಲ್ಯವಿರುವ ಪ್ರದೇಶಗಳನ್ನು ಸೇರಿಸಿ ರಾಜ್ಯಗಳನ್ನು ರಚಿಸಲಾಗಿದೆ. ಆದರೆ ಕೊಡವ ಭಾಷಿಗರೇ ಹೆಚ್ಚಿರುವ ಪ್ರದೇಶಗಳನ್ನು ಕರ್ನಾಟಕದಲ್ಲಿ ಉಳಿಸಿದರೆ, ತುಳು ಪ್ರಾಬಲ್ಯದ ಪ್ರದೇಶಗಳನ್ನು ಕೇರಳ ಹಾಗೂ ಕರ್ನಾಟಕ ರಾಜ್ಯಗಳಿಗೆ ಹಂಚಲಾಗಿದೆ. ಈ ನೀತಿಯಿಂದಾಗಿ ತುಳು ಭಾಷಿಗರು ನಿರಂತರವಾಗಿ ಅನ್ಯಾಯಕ್ಕೊಳಗಾಗಿದ್ದಾರೆ. ಅತ್ತ ಕೇರಳ ರಾಜ್ಯದಲ್ಲೂ ತುಳು ಭಾಷೆ ತುಳಿತಕ್ಕೊಳಗಾಗುತ್ತಿವೆ, ಇತ್ತ ಕರ್ನಾಟಕ ರಾಜ್ಯ ಸರ್ಕಾರಕ್ಕೂ ತುಳು ಬೇಡವಾಗಿದೆ ಎಂಬಂತಿದೆ ಎಂಬುದು ಹಲವರ ನೋವು.
ಅಂಚಿ ಕೇರಳಗ್ಲಾ ಬೊರ್ಚಿ, ಇಂಚಿ ಕರ್ನಾಟಕಗ್ಲಾ ಬೊರ್ಚಿ ತುಳು ಬಾಸೆ,
ತುಳುವೆರೆಗ್ ದಾಯೆ ಬೋಡು ರಾಜ್ಯೋತ್ಸವ?#TuluOfficialinKA_KL— Pradii_vishwakarma (@PradiiV) November 1, 2022
ಈ ವಾಸ್ತವವನ್ನೇ ಪದಗಳಲ್ಲಿ ಸಾರಿದ್ದ ಕವಿ ಕಯ್ಯಾರ ಕಿಞ್ಞಣ್ಣ ರೈ, ‘ಅಂಚಿ ತೆಲುಗೆರ್, ಇಂಚಿ ಕನ್ನಡೆರ್, ಎಂಚ ತಮಿಳೆರ್ ಮೆರೆಪೆರ್,
ಕಣ್ಣೆದುರೇ ಕೇರಳಲ ಕೆಲಪುಂಡು
ಎನ್ನ ತುಳುನಾಡ್ ಬುಲಿಪುಂಡು” ಎಂದು ನೋವು ಹಂಚಿಕೊಂಡಿದ್ದರು.ತುಳುವರ ಸ್ಥಿತಿ ಹೇಗಿದೆ ಎಂದರೆ ‘ಅತ್ತ ಕೇರಳವು ಕೆಣಕುತ್ತಿದೆ,, ಇತ್ತ ತುಳುನಾಡು ಅಳುತ್ತಿದೆ’ ಎಂಬಂತಿದೆ ಎಂದು ಕಯ್ಯಾರ ಕಿಞ್ಞಣ್ಣ ರೈ ಅವರು ಹೇಳಿದ್ದರು. ಈ ಕವಿ ಸಾಲುಗಳನ್ನೇ ಮುಂದಿಟ್ಟು ತುಳುವರನೇಕರು ಈ ಬಾರಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಅಂಚಿ ತೆಲುಗೆರ್, ಇಂಚಿ ಕನ್ನಡೆರ್
ಎಂಚ ತಮಿಳೆರ್ ಮೆರೆಪೆರ್
ಕಣ್ಣೆದುರೇ ಕೇರಳಲ ಕೆಲಪುಂಡು
ಎನ್ನ ತುಳುನಾಡ್ ಬುಲಿಪುಂಡು"
– ಕಯ್ಯಾರ ಕಿಞ್ಞಣ್ಣ ರೈನವೆಂಬರ್ ಒಂಜಿ, ತುಳುನಾಡ ಪರತಿರಿಟ್ಟ್ ತುಳುವೆರ್ ಮದಪರೆಗಾವಂದಿ ಕರಾಳ ದಿನೊ. #BlackDay #NotMyRajyothsava
— Uday tulunad (@UdayTulunad) November 1, 2022
ಕನ್ನಡ ವಿದೇಯಕ ಮೂಲಕ ಕನ್ನಡ ಭಾಷೆಗಷ್ಟೇ ಆದ್ಯತೆ ನೀಡುತ್ತಿರುವ ಬಿಜೆಪಿ ಸರ್ಕಾರ, ತುಳು ಹಾಗೂ ಕೊಡವ ಭಾಷೆಯನ್ನು ಮರೆಯುತ್ತಿವೆ. ಹಾಗಾಗಿ ಕರಾಳ ದಿನಾಚರಣೆ ಮಾಡುತ್ತಿದ್ದೇವೆ ಎಂಬ ನೂರಾರು ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಬಿಜೆಪಿಯವರೇ ಬಹುತೇಕ ಮಂದಿ ಈ ಪೋಸ್ಟ್ ಹಾಕಿರುವ ಬೆಳವಣಿಗೆಯು ಸರ್ಕಾರಕ್ಕೆ ಮಾತ್ರವಲ್ಲ ಬಿಜೆಪಿ ಪಕ್ಷಕ್ಕೆ ಸವಾಲೆಂಬಂತಿದೆ.
Since Nov 1, 1956 our language Tulu has been ignored by @CMofKarnataka
Our demand #TuluOfficialInKA_KL hasn't been given importance yet.
Until Tulu gets the space & status it deserves in #Karnataka Nov 1 is #NotMyRajyotsava
Its a #BlackDayForTulunad @BJP4Karnataka @BJP4India pic.twitter.com/c6ZOOGgPLg— Nikshith.Kotian 𝕏 (@kotian_nikki) November 1, 2022
I'm a proud Tuluva. I'm blessed to be born in Parashurama Srishti 'Tulunadu'. I'm very proud of my language and the culture. Tulu deserves to be declared as an official language of Karnataka.#Tulu#tulunadu#TuluOfficialinKA_KL #TuluTo8thSchedule #tulutweetarmy pic.twitter.com/53B00Dmlkm
— Shridhar (@Shridha28203375) November 1, 2022
ಎನ್ನ ಅಪ್ಪೆ ಮಣ್ಣ್ ಪೊರ್ಲ ತುಳುವ ನಾಡ್ ಕರ್ನಾಟಕ ಬೊಕ್ಕ ಕೇರಳೋಗು ಕಡಿದ್ 2 ಆಯಿಂಚಿ ದಿನೊ.. ಖಂಡಿತ ಈ ದಿನ ತುಳುವೆರೆಗ್ ಅನ್ಯಾಯ ಆಯಿನ ದಿನೊ.ನಮ್ಮ ಅಪ್ಪೆ ಬುಲಿಪುನಗ ನಮ ಖುಷಿ ಪಡೆಯರ ಎಂಚ ಸಾಧ್ಯ #BlackDayForTulunad #TulunadState #TuluOfficialinKA_KL pic.twitter.com/4p1vc6FpAl
— Rakshith Kj Kadaba (@KadabaKj) November 1, 2022
ಇನ್ನೊಂದೆಡೆ, ತುಳು ಭಾಷೆಯ ವಿಚಾರದಲ್ಲಿ ಬಹುಕಾಲದಿಂದ ಹೋರಾಟ ನಡೆಯುತ್ತಿದ್ದರೂ ಶಾಸಕರು ಸಂಸದರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮನ್ನು ಕಡೆಗಣಿಸಿರುವ ಜನನಾಯಕರ ವಿರುದ್ದ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಅವ್ವು ವ ರಾಜ್ಯೋಸ್ತವ ಒಲು ಅಪ್ಪೆ ಭಾಷೆಗ್ ಮಾನಾದಿಗೆ ಇಜ್ಜಿ. ತುಳು ಭಾಷೆಗ್ ಮಾನಾದಿಗೆ ಕೊರಂದಿನ ಸರ್ಕರೊಗು ತುಳುವೆರೆನ ಏಪಲ ಶಾಪ ಉಂಡು.#BlackDayForTulunad #TuluOfficialinKA_KL pic.twitter.com/hL50BQBtNb
— Everyday Tulu (@everyday_tulu) November 1, 2022
ಇಷ್ಟಾದರೂ, ತಮ್ಮೂರಿನ ಮಂದಿ ತಮ್ಮ ತಾಯ್ನುಡಿನ ಬಗ್ಗೆ ಆಗ್ರಹ ಮುಂದಿಟ್ಟಿದ್ದರೂ, ಸಂಸದ ನಳಿನ್ ಕುಮಾರ್ ಆಗಲೀ, ಸಚಿವರಾದ ಸುನಿಲ್ ಕುಮಾರ್ ಆಗಲಿ, ಕೋಟಾ ಶ್ರೀನಿವಾಸ ಪೂಜಾರಿಯಾಗಲೀ ತುಟಿಕ್ ಪಿಟಿಕ್ ಅನ್ನುತ್ತಿಲ್ಲವೇಕೆ ಎಂಬುದೇ ಕುತೂಹಲದ ಸಂಗತಿ. ‘ಜನರು ಏನೇ ಹೇಳುತ್ತಿರಲಿ, ಬೈದಾಡುತ್ತಿರಲಿ, ಚುನಾವಣೆ ಕಾಲದಲ್ಲಿ ಹಿಂದೂತ್ವ ಅಜೆಂಡಾವೇ ನಮಗೆ ಶ್ರೀರಕ್ಷೆ’ ಎಂಬ ಖಚಿತ ವಿಶ್ವಾಸವೇ ಈ ನಾಯಕರ ಮೌನದ ಹಿಂದಿರುವ ರಹಸ್ಯ. ಹಾಗಾಗಿ ನಳಿನ್ ಹಾಗೂ ಸುನಿಲ್ ತಮ್ಮದೇ ರೀತಿ ವರ್ತಿಸುತ್ತಿದ್ದಾರೆಂಬುದು ಹಲವು ಮಂದಿ ಬಿಜೆಪಿ ನಾಯಕರದ್ದೇ ಆಕ್ರೋಶ. ಇದೀಗ ಈ ಆಕ್ರೋಶ ‘ಪ್ರತೇಕ ರಾಜ್ಯ’ದ ಕೂಗಿಗೆ ಧ್ಚನಿಯಾಗಿರುವುದು ಅಚ್ಚರಿ ಹಾಗೂ ಕುತೂಹಲ ಎಂಬಂತಿದೆ.
ತುಲು ಬಾಸೆಗ್ ಮಾನಾದಿಗೆ ಯಾಪ ತಿಕ್ಕು 🥺#tulunadu #tuluofficialinka_kl #cmofkarnataka #BlackDayForTulunad pic.twitter.com/wBddT6reDH
— Durga Prasad Rai (@DurgaPr42493031) October 31, 2022
























































