ಇತಿಹಾಸದ ಪುಟ ತೆರೆದಂತೆ ಹಿಂದೆ ವಿಶ್ವದ ಗಟ್ಟಿ ಸಾಮ್ರಾಜ್ಯದಲ್ಲಿ ಒಂದಾದ ಪ್ರಂಚ್ ಸಾಮ್ರಾಜ್ಯ ತನ್ನ ಅಸ್ತಿತ್ವ ಕಳೆದುಕೊಂಡಿದ್ದು ಮಾದಕವಸ್ತು ವ್ಯಸನ ವ್ಯಾಮೋಹದಿಂದ..!
📝ಎಸ್ ನಾವೂರ್
ಪ್ರಪಂಚದಲ್ಲಿ ಅದೆಷ್ಟೋ ದೇಶಗಳಿವೆ. ವಿವಿಧ ದೇಶಗಳು ವಿವಿಧ ರೀತಿಯಲ್ಲಿ ಅಭಿವೃದ್ಧಿಯ ಹಂತದಲ್ಲಿ ಬಂದು ನಿಲ್ಲುತ್ತದೆ. ಒಂದು ದೇಶದ ಅಭಿವೃದ್ಧಿಯನ್ನು ನಿರ್ಧರಿಸುವಲ್ಲಿ ಅಲ್ಲಿನ ಮಾನವ ಸಂಪನ್ಮೂಲಗಳು ಕೂಡ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ.
ಭಾರತವನ್ನು ಮನುಷ್ಯ ದೇಹಕ್ಕೆ ಹೋಲಿಕೆ ಮಾಡಿದರೆ ತಲೆ ಕಾಶ್ಮೀರ, ಕಾಲು ಕನ್ಯಾಕುಮಾರಿ, ಬೆನ್ನುಮೂಳೆ ಕೃಷಿ,ಮೆದುಳು ವಿಜ್ಞಾನ. ಒಂದು ಕೈ ಸಪ್ತ ಸಹೋದರಿ ರಾಜ್ಯಗಳಾದರೆ, ಮತ್ತೊಂದು ಕೈ ಅರಬ್ಬೀ ಸಮುದ್ರ, ಕೆಂಪು ರಕ್ತ ಕಣಗಳು ಜಲಸಂಪತ್ತುಗಳಾದರೆ ಬಿಳಿ ರಕ್ತ ಕಣಗಳು ಸೈನ್ಯ. ಮೈಯಲ್ಲಿ ಅದೆಷ್ಟೋ ನರಗಳಿವೆ. ಅದು ಭಾರತದ ಅಮೂಲ್ಯ ಯುವದ ಸಂಪನ್ಮೂಲ.
ಪ್ರಪಂಚ ಇಂದು ಭಾರತವನ್ನು ಬಿಟ್ಟ ಕಣ್ಣು ಬಿಟ್ಟಾ ಹಾಗೆ ನೋಡುತ್ತಿರಲು ದೊಡ್ಡ ಕಾರಣ ಭಾರತದಲ್ಲಿ ಆಗುತ್ತಿರುವ ಕ್ಷಣ ಕ್ಷಣದ ಬದಲಾವಣೆ,ನೀತಿಗಳು ಹಾಗೂ ಭಾರತದಲ್ಲಿರುವ ಯುವ ಸಂಪನ್ಮೂಲಗಳ ಕ್ರೋಢಿಕರಣ. ಇದು ಇಡೀ ಪ್ರಪಂಚವೇ ಇಡೀ ಭಾರತವನ್ನು ಹಿಂದೆ ತಿರುಗಿ ನೋಡುವಂತೆ ಮಾಡಿದ್ದು ಪ್ರಪಂಚದ ಹೆಚ್ಚಿನ ದೇಶಗಳು ಒಳಗೊಳಗೆ ಮತ್ಸರ ಪಡುತ್ತಿರುವುದು ಕೂಡ ಸುಳ್ಳಲ್ಲ. ಆದರೆ ಇವುಗಳ ನಡುವೆ ಇಂದಿನ ವಾಸ್ತವ ಚಿತ್ರಣವನ್ನು ಬಹಳ ಸೂಕ್ಷ್ಮವಾಗಿ ಅವಲೋಕ ಮಾಡಿದಾಗ ನಮ್ಮ ದೇಶದ ಹೆಚ್ಚಿನ ಯುವಜನತೆ, ಮಾದಕ ವ್ಯಸನ ಮದ್ಯ ವ್ಯಸನದ ಕಡೆ ಮುಖ ಮಾಡುತ್ತಿರುವುದು ಬಹಳ ನೋವಿನ ವಿಚಾರ ಜೊತೆಗೆ ನಿರೀಕ್ಷಿತ ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಬಹುದೊಡ್ಡ ಹೊಡೆತ ಕೂಡ ಹೌದು.
ಸುಮ್ಮನೆ ಗಮನಿಸೋಣ. ನಮ್ಮ ದೇಶಕ್ಕೆ ಹೆಚ್ಚು ಸೈನಿಕರನ್ನು ಧಾರೆ ಎರೆಯುವ, ಕೃಷಿಗೆ ಹೇರಳವಾಗಿ ಕೊಡುಗೆ ನೀಡುವ, ದೇಶದ ಗೋಧಿಯ ಕಣಜ,ಪಂಚ ನದಿಗಳ ನಾಡು ಎಂಬ ಖ್ಯಾತಿಯ ಪಂಜಾಬ್ ರಾಜ್ಯ ದೇಶದಲ್ಲಿ ಅತಿ ಹೆಚ್ಚು ಮಾದಕ ವ್ಯಸನಿಗಳನ್ನು ಹೊಂದಿದ ರಾಜ್ಯ ಎಂಬುದು ಮತ್ತೊಂದು ಆಯಾಮದ ದುರಂತ ಸತ್ಯ. ಭಾರತ ಹಾಗೂ ವಿರೋಧಿ ರಾಷ್ಟ್ರಗಳ ಮಧ್ಯೆ ಗಡಿ ವಿವಾದ ಹೊಂದಿದ್ದು ಗಡಿ ಉಲಂಘನೆ, ಕ್ಯಾತೆಗಳ ಜೊತೆ ಭಾರತಕ್ಕೆ ಕಿರಿಕ್ ಮಾಡಿದರೆ, ಮಾದಕವಸ್ತುಗಳ ಸಾಗಾಟ ಮಾಡಿ, ನಮ್ಮ ದೇಶದ ಯುವ ಜನತೆ ಮಾದಕ ವ್ಯಸನಿಗಳಾಗುವಂತೆ ಮಾಡಿ, ನಮ್ಮ ಯುವ ಜನತೆಯ ಮೇಲೆ ವಿವಿಧ ರೀತಿಯ ಪರಿಣಾಮ ಬೀರುವಂತೆ ಮಾಡಿ ಪರೋಕ್ಷವಾದ ದಾಳಿಯನ್ನು ಮಾಡುತ್ತಿರುವುದನ್ನು ನಾವು ನಮ್ಮ ಹಿತ ದೃಷ್ಟಿ,ದೇಶದ ಹಿತ ದೃಷ್ಟಿ, ದೇಶದ ಭದ್ರತೆಯ ಹಿತ ದೃಷ್ಟಿಯಿಂದ ಸೂಕ್ಷ್ಮವಾಗಿ ಅವಲೋಕಿಸುವಂತದ್ದು..
ಇಂದು ಸಮಾಜದಲ್ಲಿ ನಡೆಯುವ ಅವೆಷ್ಟೋ ಸಮಾಜಘಾತುಕ ಕಾರ್ಯಗಳ ಹಿಂದೆ ಮಾದಕ ವ್ಯಸನ, ಮದ್ಯವ್ಯಸನದ ಪಾತ್ರ ಏನು ಎಂಬುದನ್ನು ನಮ್ಮ ಸುತ್ತ ಮುತ್ತ ನಡೆದ ಕೊಲೆ,ಅತ್ಯಾಚಾರ ವಿವಿಧ ಸಮಾಜಘಾತುಕ ಪ್ರಕರಣ, ವಿಶೇಷವಾಗಿ ದೇಶದಲ್ಲಿ ಸದ್ದು ಮಾಡಿದ ವಿವಿಧ ಘಟನೆಗಳಲ್ಲಿ ಒಂದಾದ (ದೆಹಲಿಯ ನಿರ್ಭಯ ಘಟನೆ, ತೆಲಂಗಾಣದ ಪಶುವೈದ್ಯೆಯ ಘಟನೆ) ಇಂತಹ ಪ್ರಕರಣದ ಇತಿಹಾಸ ಕೆದಗಿದಾಗ ಸಿಗುವ ವಿಚಾರಗಳು.ತಮ್ಮ ಮಾನಸಿಕ ಮಟ್ಟದ ಸೀಮಿತವನ್ನು ಕಳೆದುಕೊಂಡು, ತಪ್ಪು ಸರಿಗಳ ಲೆಕ್ಕಾಚಾರ, ಲೆಕ್ಕ ತಪ್ಪುವುದು ಮುಂದೆ ಕೃತ್ಯಕ್ಕೆ ಒಳಪಟ್ಟವರು, ಕೃತ್ಯ ಮಾಡಿದವರ ಮೇಲೆ ಶಾಶ್ವತ ನೋವಿನ ಛಾಯೆ, ಎರಡು ಕಡೆ ಆಘಾತ ನೀಡಿದ್ದು ಮಾತ್ರ ಮಾದಕ ವ್ಯಸನ ಅಥಾವ ಮದ್ಯ ವ್ಯಸನಗಳೆಂಬ ಕರಾಳ ಮುಖ.
ಬದುಕಿನಲ್ಲಿ ತೀಕ್ಷ್ಣವಾದ, ಮುಂದಾಲೋಚನೆಯ ಕೊರತೆಗಳು,ತೀರ್ಮಾನಗಳು (ಆತ್ಮಹತ್ಯೆ,ಕೆಲವು ಆಕಸ್ಮಿಕ ಸಾವು, ನೀರಿನಲ್ಲಿ ಮುಳುಗಿ ಸಾವು, ಮಾರಕ ರೋಗಗಳಿಗೆ ಬಲಿ, ರಸ್ತೆ ಅಪಘಾತ) ಇಂತಹ ಹೆಚ್ಚಿನ ಘಟನೆಗಳು ಮಾದಕ ವ್ಯಸನ, ಮದ್ಯವ್ಯಸನ ಸೇವನೆಯ ಬಳಿಕ ನಡೆಯುವ ದುರಂತ ಘಟನೆಗಳು, ಕಾರಣ ಕ್ಷಣಿಕ ಖುಷಿಯೊಳಗೆ ಮುಂದೆ ಎನಾಗಬಹುದು ದೆಂಬ ಯೋಚನೆಯ ಹಿಡಿತ ಕಳೆದುಕೊಳ್ಳುವುದು. ತೀರ್ಮಾನ ತೆಗೆದುಕೊಳ್ಳುವಲ್ಲಿನ ವೈಫಲ್ಯ. ಕಡೆಗೆ ತಮ್ಮ ಹಾಗೂ ತಮ್ಮವರ ಬದುಕು ದುರಂತ ಕಡೆಗೆ ಸೆಳೆತ.
ನಮ್ಮ ಹಾಗೂ ನಮ್ಮ ಮನೆಯ ಸಂಭ್ರಮಗಳೇ ಕೆಲವೊಂದು ಬದುಕಿನ ಅಂತ್ಯದ ಆರಂಂಭಕ್ಕೆ ಮುನ್ನುಡಿ. ಬಹುಶಃ ಇದು ಇಂದು ಕೂಡ ಎಷ್ಟೋ ಮಂದಿಗೆ ಇನ್ನೂ ಅರ್ಥವಾದ ವಿಷಯವಾಗಿರಬಹುದು.
ಈ ವಿಚಾರವನ್ನು ವಿಷಯ ವಿಶ್ಲೇಷಣೆ ಮಾಡುವುದಾದರೆ,ನಮ್ಮ ಮನೆಯಲ್ಲಿ ನಡೆಯುವ ವಿವಿಧ ಸಂಭ್ರಮದಲ್ಲಿ ಒಂದಾದ ವಿಶೇಷವಾಗಿ ಮದುರಂಗಿಯ ಮದುವೆಯ ಕಡೆಗೆ ಗಮನ ಕೊಡಬೇಕು, ಸರ್ವವು ಪ್ರತಿಷ್ಟಿತೆಯಲ್ಲಿ ಕಾರ್ಯಕ್ರಮ ನಡೆಯಬೇಕು, ಗೆಳೆಯರಿಗೆ ಖುಷಿಯಾಗಬೇಕೆಂಬ ಅಭಿಲಾಷೆಯೊಳು ಕೆಲವು ಕಡೆ ಮದುರಂಗಿಯಲ್ಲಿ ನಡೆಯುವ ಮದ್ಯಪಾನದಲ್ಲಿ ಕುತೂಹಲದಿಂದ ಆರಂಭವಾಗಿ ಮೊದಲ ಕುಡುಕ ಹುಟ್ಟಿಕೊಳ್ಳುತ್ತಾನೆ. ಅಂಥವರಲ್ಲಿ ಕೇಳಿದಾಗ ಎಲ್ಲಿ ಮೊದಲು ಕುಡಿದದ್ದು ಎಂದಾಗ ಬರುವ ಉತ್ತರ ಮದುರಂಗಿಯ ಮನೆಯಲ್ಲಿ. ನಮ್ಮ ಮನೆಯ ಸಂಭ್ರಮದಲ್ಲಿ ಪ್ರತಿಷ್ಠೆಗೆ, ಗೆಳೆಯರ ಪ್ರೀತಿಗಾಗಿ ಮಾಡಿದ ಕುಡಿತ ಒಂದು ಹೊಸ ಕುಡುಕನ್ನು ಸಮಾಜಕ್ಕೆ ದೇಶಕ್ಕೆ ನೀಡುತ್ತಿದ್ದೇವೆ ಎಂದು ಎಷ್ಟು ಮಂದಿ ನಾವು ತಿಳಿದವರು ತಿಳಿದ್ದೇವೆ. ಮನೆಯ ಪ್ರತಿಷ್ಠೆಗಾಗಿ ಸಂಭ್ರಮ ಮನೆಯಲ್ಲಿ ಕುಡಿತದ ವ್ಯವಸ್ಥೆ ಅದೇ ಕುಡಿದು ಹೋದವನ ಕುಟುಂಬದಲ್ಲಿ ನೆಮ್ಮದಿ ಎಂಬುದು ಬರಿ ಭ್ರಮೆ.
ಸಮಾಜ ಕಟ್ಟುವಲ್ಲಿ ದೇಶ ಕಟ್ಟುವಲ್ಲಿ ನಮ್ಮ ಪಾತ್ರವೇನು ಏನು ಎಂಬುದರ ಬಗ್ಗೆ ನಾವು ಮರೆತ್ತಿದ್ದೇವೆಯೇ? ಆಚರಣೆ, ಸಂಭ್ರಮದ ಹೆಸರಿನಲ್ಲಿ ನಾವು ಪರೋಕ್ಷವಾಗಿ ನಮ್ಮ ದೇಶವೆಂಬ ಕುಟುಂಬದ ಯುವ ಸದಸ್ಯರ ಮೇಲೆ ನಾವೇ ದಾಳಿ ಮಾಡುತ್ತಿದ್ದೇವೆ ಎಂಬುದು ನಮಗೆ ಇಂದಿಗೂ ತಿಳಿಯದ ಸತ್ಯ. ಇಂದು ನಡೆಯುವ ಕೆಲವು ಪ್ರತಿಭಟನೆ, ಹೋರಾಟದ ಹಿಂದೆ ಮಾದಕ ವ್ಯಸನ, ಮದ್ಯವ್ಯಸನ ವಾಸನೆಯು ಮುಖಕ್ಕೆ ಬಡಿಯುತ್ತಿರುವುದು, ಇವುಗಳು ದೇಶವನ್ನು ಗೊಂದಲದ ಗೂಡಾಗಿ ಪರಿವರ್ತನೆ ಮಾಡುತ್ತಿವೆ, ಅನ್ನೋದು ಸಮಾಜಮುಖಿ ಚಿಂತನೆಯಲ್ಲಿ ಚಿಂತನಾಶೀಲ ವಾದ.
ಕೊನೆಯ ಮಾತು : ಒಂದು ರಾಷ್ಟ್ರವನ್ನು ಸೋಲಿಸ ಬೇಕಾದರೆ ಕೇವಲ ಯುದ್ಧವೇ ಆಗಬೇಕೆಂದಿಲ್ಲ. ಅಲ್ಲಿನ ಆರ್ಥಿಕ, ಮಾನವ ಸಂಪನ್ಮೂಲಗಳ ಮೇಲೆ, ಪರೋಕ್ಷವಾಗಿ ಸವಾರಿ ಮಾಡಿದರೆ ಮಾನವ ಸಂಪನ್ಮೂಲ ತನ್ನ ನೈಜ ಸತ್ವವನ್ನು ಕಳೆದುಕೊಳ್ಳುತ್ತದೆ. ಇತಿಹಾಸದ ಪುಟ ತೆರೆದಂತೆ ಹಿಂದೆ ವಿಶ್ವದ ಗಟ್ಟಿ ಸಾಮ್ರಾಜ್ಯದಲ್ಲಿ ಒಂದಾದ ಪ್ರಂಚ್ ಸಾಮ್ರಾಜ್ಯ ತನ್ನ ಅಸ್ತಿತ್ವ ಕಳೆದುಕೊಂಡಿದ್ದು ಮಾದಕವಸ್ತು ವ್ಯಸನ ವ್ಯಾಮೋಹದಿಂದ ಇತಿಹಾಸದ ಕಥೆ, ವ್ಯಥೆ. ಸುತ್ತಲು ತುಂಬಿರುವ ವಿರೋಧಿಗಳ ನಡುವೆ ಭಾರತ ಒಂದಿಷ್ಟು ಗಟ್ಟಿ ನಿರ್ಧಾರದೊಂದಿಗೆ ಬದಲಾವಣೆಯೊಂದಿಗೆ ಜಗತ್ತಿನಲ್ಲಿ ದಿಟ್ಟ ಹೆಜ್ಜೆಯ ಮುದ್ರೆ ಹಾಕಿ ಮುನ್ನುಗ್ಗುತ್ತಿರುವಾಗ,ನಮ್ಮ ಯುವ ಸಂಪತ್ತಿನ ದೈಹಿಕ ಮಾನಸಿಕ ಶಕ್ತಿ ಕುಂದುಸಲು ವಿವಿಧ ರೀತಿಯಲ್ಲಿ ದಾಳಿ ಮಾಡಲು ಮಾದಕವಸ್ತು ಮಾದಕ ವ್ಯಸನವೆಂಬ ಶಸ್ತ್ರವನ್ನು ಪ್ರಯೋಗವಾಗುತ್ತಿರುವುದು ಇವುಗಳ ಹಿಂದೆ ನಮ್ಮೊಳಗೆ ಜಾಲವಿದೆ ಅವುಗಳಿಗೆ ತಾಣವಿದೆ ಇವುಗಳ ಬಗ್ಗೆ ಸಮಾಜ, ದೇಶ, ದೇಶದ ಸರ್ವ ಅಡಳಿತ, ಮನೆ, ಕುಟುಂಬ, ಸಮಾಜಮುಖಿ ಸಂಘಟನೆಯ ಚಿಂತನಾಶೀಲ ನಿಲುವುಗಳು, ಜಾಗೃತಿ ಚಟುವಟಿಕೆಗಳ ರೂಪುರೇಷೆಯ ರಚನೆ, ಜಾರಿಗಳು ತಾವು ಬದಲಾಗಿ, ದೇಶದ ಅಭಿವೃದ್ಧಿಯ ಹಿತ ರಕ್ಷಣೆಯ ಹಿತದಿ ಸ್ವಾರ್ಥ, ರಾಜಿ, ಇಲ್ಲದೇ ದೇಶದ ಸರ್ವವು ಅಡಳಿತದ ಮೇಲೆ ಇದ್ದರೆ,ಅವುಗಳನ್ನು ಎಚ್ಚರಿಸುವ ಜವಬ್ದಾರಿ ಸರ್ವ ರಾಷ್ಟ್ರ ವಾದಿಗಳ ಮೇಲಿದೆ.
ಯಾಕೆಂದರೆ ಭಾರತದ ಭವಿಷ್ಯಕ್ಕೆ ಯುವ ಜನತೆಯ ಮೇಲೆ ಒಂದು ಕನಸಿದೆ,ಭರವಸೆಯ ಬೆಳಕಿನ ಆಶಾದಾಯಕ ಭಾವವಿದೆ.


























































