ಮಂಗಳೂರು: ಮಂಗಳೂರಿನ ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ವತಿಯಿಂದ ಸಂಗೀತ ವಿದುಷಿ ವಿಭಾ ಶ್ರೀನಿವಾಸ್ ನಾಯಕ್ ಅವರ ಸಂಗೀತ ಸುಧೆಯ ‘ರಂಗಾ ನಿನ್ನ’.. ಭಕ್ತಿ ಗೀತೆಗಳ ಆಲ್ಬಮ್ ಸಾಂಗ್ ಬಿಡುಗಡೆ ಮಾಡಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಕಾರ್ಯಕ್ರಮ ಗಮನಸೆಳೆಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಈ ಆಲ್ಬಮ್ ಸಾಂಗ್ ಅನಾವರಣ ಮಾಡಿದರು.
ಬೈಕಂಪಾಡಿಯ ಅನಘ ರಿಫೈನರೀಸ್ ಇದರ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಮಂಗಳೂರಿನ ಡಿಂಕಿ ಡೈನ್ ಇದರ ಆಡಳಿತ ನಿರ್ದೇಶಕರಾದ ಸ್ವರ್ಣ ಸುಂದರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಲಾ ಸಾಧನ ಮ್ಯೂಸಿಕ್ ಸ್ಕೂಲ್ನ ಪ್ರಮುಖರ ಸಮ್ಮುಖದಲ್ಲಿ ಈ ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಯಿತು.
‘ರಂಗಾ ನಿನ್ನ ಕೊಂಡಾಡುವೆ..’ ನೀವು ನೋಡಲೇಬೇಕಾದ ವೀಡಿಯೋ..
ವಿಭಾ ಶ್ರೀನಿವಾಸ್ ನಾಯಕ್ ಅವರ ಕಂಠ ಸಿರಿಯಲ್ಲಿ ಮೂಡಿಬಂದ ಈ ದೃಶ್ಯ ಕಾವ್ಯದಲ್ಲಿ ಕಡಲಂಚಿನ ಸನ್ನಿವೇಶ, ಶ್ರೀಕೃಷ್ಣನ ಸಂಗಾತಿಯಾದ ನವಿಲು ಗರಿ ಜೊತೆಗಿನ ಸಮ್ಮಿಳಿತವು ಭಕ್ತಿ ಲಹರಿಗೆ ಆಕರ್ಷಣೆ ತುಂಬಿದೆ. ಈ ವೀಡಿಯೋ ಸಾಂಗ್ ಬಗ್ಗೆ ವಿಶ್ಲೇಷಣೆ ಮಾಡಿರುವ ಸಾರಸ್ವತ ಕ್ಷೇತ್ರದ ಗಣ್ಯರು ಹಾಗೂ ಕಲಾವಿದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.