ಬೆಂಗಳೂರು: ರಾಜ್ಯ ಸರ್ಕಾರದ ಚುನಾವಣಾ ದರ್ಬಾರ್ ಹೇಗಿದೆ ಎಂದರೆ ಉಪಮುಖ್ಯಮಂತ್ರಿ ಕಚೇರಿಯೇ ಇದೀಗ ಕಾಂಗ್ರೆಸ್ ಕಚೇರಿ ಎಂಬಂತಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸರ್ಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಪಜ್ಷ ಸೇರ್ಪಡೆ ಕಾರ್ಯಕ್ರಮ ಏರ್ಪಾಡಗಿದ್ದು, ಈ ಸನ್ನಿವೇಶವನ್ನು ಪ್ರತಿಪಕ್ಷ ಬಿಜೆಪಿ ಇದೀಗ ಅಸ್ತ್ರವನ್ನಾಗಿಸಿದೆ
ಕಾಂಗ್ರೆಸ್ನಿಂದ ವಿಧಾನಸೌಧದಲ್ಲಿ ಪಾಕಿಸ್ತಾನ್ಗೆ ಜಿಂದಾಬಾದ್ ಹೇಳಿಸಿದ್ದಾಯ್ತು, ಈಗ ಸರ್ಕಾರಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿ ಫೊಟೋ ಹಂಚಿಕಿಂಡಿರುವ ಬಿಜೆಪಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ, ಸರ್ಕಾರಿ ಕಚೇರಿಗಳಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ದುರಂತ ಎಂದಿದೆ. ಸರ್ಕಾರಿ ಕಚೇರಿಗಳ ಘನತೆಯನ್ನು ಸ್ವಾರ್ಥ ಸಾಧನೆಗಾಗಿ ಮಲೀನಗೊಳಿಸಬೇಡಿ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಈ ಬೆಳವಣಿಗೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಸೆಳೆದಿರುವ ಬಿಜೆಪಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಸರ್ಕಾರಿ ಕಚೇರಿಯನ್ನು ದುರುಪಯೋಗಪಡಿಸಿಕೊಂಡ ಕಾಂಗ್ರೆಸ್ ಮುಖಂಡರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.