ಬೆಂಗಳೂರು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸದಿದ್ದರೆ ಬೆಂಗಳೂರಿನಲ್ಲಿ 13ರಂದು ಜಿ 20 ರಾಷ್ಟ್ರಗಳ ಸಮಾವೇಶಕ್ಕೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ರೈತ ಮುಖಂಡರು ಘೋಷಿಸಿದ್ದಾರೆ.
ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ಕಳೆದ 19 ದಿನಗಳಿಂದ ಬೆಂಗಳೂರಿನ ಫ್ರೀಡಂ ಪರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು ರಾಜ್ಯ ಸರ್ಕಾರ ಸ್ಪಂಧಿಸಿಲ್ಲ ಎಂಬುದು ಅನ್ನದಾತರ ಆಕ್ರೋಶ. ಇಂದೂ ಕೂಡಾ ಜಿಗಿ ಜಿಗಿ ಮಳೆಯಲ್ಲಿ ಶಾಮಿಯಾನ ಸುರಿಯುತ್ತಿದ್ದರು ರೈತರು ಸರ್ಕಾರವನ್ನ ಶಾಪಿಸುತ್ತ ಅಡುಗೆ ಮಾಡಿ ಊಟ ಮಾಡಿ ಹೂರಾಟ ಮುಂದುವರೆಸಿದರು
ಸರ್ಕಾರದ ಕೃಷಿ ಇಲಾಖೆ ವರದಿಯಲ್ಲಿ ಕಬ್ಬು ಬೆಳೆದ ರೈತರಿಗೆ ಎಕರೆಗೆ 20 ಸಾವಿರ ನಷ್ಟವಾಗುತ್ತಿದೆ ಎನ್ನುತ್ತಾರೆ, ಸರ್ಕಾರ ಯಾಕೆ ಕಬ್ಬಿಗೆ ಕೇವಲ 50ರೂ ಹೆಚ್ಚುವರಿ ಮಾಡಿದ್ದಾರೆ 19ನೇ ದಿನದ ಹೋರಾಟ ನಿರತ ಕಬ್ಬು ಬೆಳೆಗಾರರ ಪ್ರಶ್ನೆಯಾಗಿದೆ
ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್ಆರ್ಪಿ ದರದಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಎಕರೆಗೆ 20ಸಾವಿರ ನಷ್ಟವಾಗುತ್ತದೆ ಎಂದು ಹೇಳುವ ಕೃಷಿ ಇಲಾಖೆ ವರದಿಯನ್ನು ಸಕ್ಕರೆ ಸಚಿವರು ನೋಡಿದಂತಿಲ್ಲ. ಹೆಚ್ಚುವರಿಯಾಗಿ ಟನಗೆ 50 ರೂ ನೀಡಲು ಹೊರಡಿಸಿರುವ ಆದೇಶ ವಾಪಸ್ ಪಡೆದು ನ್ಯಾಯಯುತ ಬೆಲೆ ನಿಗದಿ ಮಾಡಲಿ ಎಂಬುದು ಹೋರಾಟನಿರತರ ಆಗ್ರಹ.
ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಒಂದು ಎಕರೆ ಕಬ್ಬು ಬೆಳೆಯಲು ಒಂದು ಲಕ್ಷ ಮೂವತ್ತಾರು ಸಾವಿರ ವೆಚ್ಚವಾಗುತ್ತದೆ. ಎಕರೆಗೆ 40 ಟನ್ ಕಬ್ಬು ಬೆಳೆದ ರೈತನಿಗೆ 20 ಸಾವಿರ ನಷ್ಟವಾಗುತ್ತದೆ ಎಂದು ಇದೇ ಸರ್ಕಾರ ವರದಿ ಹೇಳುತ್ತದೆ. ಆದರೆ ಬೆಲೆ ಏರಿಕೆ ಮಾಡುವಾಗ ಭಿಕ್ಷೆಯ ರೀತಿಯಲ್ಲಿ ಏರಿಕೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಶುಗರ್ ಮಾಫಿಯಾ ಒತ್ತಡದಿಂದ ಹೊರಗೆ ಬಂದು ರೈತರಿಗೆ ನ್ಯಾಯಯುತ ಬೆಲೆ ನಿಗದಿ ಮಾಡಲಿ ಎಂದವರು ಆಗ್ರಹಿಸಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚ ಲಗಾಣಿ, ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದ್ದಾರೆ, ಇದರ ಹಿಂದೆ ದೊಡ್ಡ ಕೈವಾಡ ಇದೆ ವಾಮಮಾರ್ಗದ ಚುನಾವಣಾ ನಿಧಿ ಸಂಗ್ರಹ ಸಾಹಸವಾಗಿದೆ ಎಂದ ಅವರು, ರೈತರಿಗೆ ಮೋಸ ಮಾಡುತ್ತಾರೆ ಎಂದು ಆಪಾದಿಸುವ ಕಾರ್ಖಾನೆ ಮಾಲೀಕರೇ ನೀಡುವ ಪಾರದರ್ಶಕತೆ ಇಲ್ಲದ ಸಕ್ಕರೆ ಇಳುವರಿ, ಹಾಗೂ ರೈತರಿಗೆ ಹಣ ಪಾವತಿ ವರದಿಯನ್ನು ಪಡೆದು ಸರ್ಕಾರ ಹೇಳಿಕೆ ನೀಡುವುದು ಎಷ್ಟು ಸಮಂಜಸ ಎಂದರು.
ಕಬ್ಬಿನಿಂದ ಬರುವ ಯಥನಾಲ್, ಮೊಲಾಸಿಸ್ ಬಗ್ಯಾಸ್, ಮಡ್ಡಿ ,ಸಕ್ಕರೆ, ಉತ್ಪನ್ನಗಳ ಲಾಭವನ್ನು ಪರಿಗಣಿಸಿ ಉತ್ಪಾದನೆಗೆ ತಗಲುವ ಖರ್ಚನ್ನ ತಯಾರಿಸುವ ವರದಿಯಲ್ಲಿ ರೈತ ಪ್ರತಿನಿಧಿಗಳು ಯಾಕೆ ಇರುವುದಿಲ್ಲ ಎಂದು ಪ್ರಶ್ನಿಸಿದ ಕುರುಬರು ಶಾಂತಕುಮಾರ್, ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರು, ಲೋಕಸಭಾ ಸದಸ್ಯರುಗಳ ನಿಯೋಗ ಇದೆ ತಿಂಗಳ 19 /20 ರಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರು ಆಹಾರ ಸಚಿವರನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಬಾನಿವಾರ (ಡಿ. 11ರಂದು) ಧರಣಿ ಸ್ಥಳದಲ್ಲಿ ದೆಹಲಿ ರೈತ ಹೋರಾಟದಲ್ಲಿ ಮಡಿದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರು ಭಾಗವಹಿಸಿ, ರೈತ ಹೋರಾಟದ 750 ಹುತಾತ್ಮ ರೈತರಿಗೆ ಮೇಣದಬತ್ತಿ ಉರಿಸಿ ಶ್ರದ್ಧಾಂಜಲಿ ನಮನ ಸಲ್ಲಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ತಿಳಿಸಿದರು.
ಇಂದಿನ 19ನೇ ದಿನದ ಪ್ರತಿಭಟನೆಯಲ್ಲಿ, ಪಿ ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಕಿರಗಸೂರ ಶಂಕರ, ಸಿದ್ದೇಶ ಕೆಂಡಗಣಸ್ವಾಮಿ,ಮಾದಪ್ಪ ವೆಂಕಟೇಶ್, ಮಹದೇವಸ್ವಾಮಿ,ರಾಜು, ಅಂಬಳೆ ಮಂಜುನಾಥ, ಮುಂತಾದವರಿದ್ದರು.
























































