ಬೆಂಗಳೂರು: ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ಅವರು ಬೆಂಗಳೂರಿನಲ್ಲಿಂದು ಸ್ಟಾರ್ಟ್ ಅಪ್ ಗಳಿಗಾಗಿಯೇ ನೂತನವಾಗಿ ಶುರುವಾಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಿಶೇಷ ಶಾಖೆಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು, ನಮ್ಮ ಯುವ ಜನಾಂಗದ ಶಕ್ತಿಗೆ, ಆರ್ಥಿಕತೆಯ ನೆರವು ನೀಡಲು ಈ ಬ್ಯಾಂಕ್ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಕರ್ನಾಟಕದ 3ನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು, ರಾಜ್ಯದಾದ್ಯಂತ 1.50 ಟ್ರಿಲಿಯನ್ ರೂ. ವ್ಯವಹಾರ ನಡೆಸುತ್ತಿದ್ದು, 749 ಶಾಖೆಗಳನ್ನು ಹೊಂದಿದೆ ಎಂದರು. ಇನ್ನು ಈ ಬ್ಯಾಂಕ್, ಇಂಡಿಯಾದ ಮೊದಲ ಸ್ಟಾರ್ಟ್-ಅಪ್ ಶಾಖೆಯನ್ನು ರಾಜ್ಯದಲ್ಲಿ ಶುರುಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ಚಿಲ್ಲರೆ, MSME ಮತ್ತು ಚಿನ್ನದ ಸಾಲ ವಿಭಾಗದ ಅಡಿಯಲ್ಲಿ ಸಾಲವನ್ನು ಮಂಜೂರು ಮಾಡಲು ವಿಶೇಷ ಶಾಖೆಗಳು ಮತ್ತು ಸಂಸ್ಕರಣಾ ಕೇಂದ್ರಗಳನ್ನು ಇದು ಸ್ಥಾಪಿಸಿದ್ದು, ಈ ಮೂಲಕ ಲಕ್ಷಾಂತರ ಜನರು ತಮ್ಮ ಜೀವನವನ್ನು ಸೃಷ್ಟಿಸಿಕೊಂಡಿದ್ದಾರೆ ಎಂದರು.
ಈ ವೇಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಅಲೋಕ್ ಕುಮಾರ್, ಬ್ಯಾಂಕ್ ನ ಇತರೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


























































