ರಾಂಚಿ: ರಾಂಚಿಯ ಹಲವೆಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ನಡೆಸಿದ ಕಾರ್ಯಾಚರಣೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಜಾರ್ಖಂಡ್’ನ ಸಚಿವ ಅಲಂಗೀರ್ ಆಲಂ ಅವರ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಮೇಲೆ ದಾಳಿ ನಡೆಸಿದ ಇ.ಡಿ. ತಂಡ ದಾಖಲೆ ಇಲ್ಲದ 25 ಕೋಟಿ ರೂಪಾಯಿ ಕಂತೆ ಕಂತೆ ನೋಟುಗಳನ್ನು ವಶಪಡಿಸಿಕೊಂಡಿದೆ.
#ED conducts raids at multiple locations in #Ranchi. A huge amount of cash amounting to more than Rs 25 crore was recovered from the household help of Sanjiv Lal, PS to #Jharkhand Rural Development Minister Alamgir Alam in the Virendra Ram case. pic.twitter.com/tOnuFz6wVH
— All India Radio News (@airnewsalerts) May 6, 2024
ಆಲಂ ಅವರು ಕಾಂಗ್ರೆಸ್ ನಾಯಕರಾಗಿದ್ದು, ಜಾರ್ಖಂಡ್ ವಿಧಾನಸಭೆಯಲ್ಲಿ ಪಾಕುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಕಾರ್ಯದರ್ಶಿ ಮನೆಯಲ್ಲಿ ಸಿಕ್ಕಿರುವ ನೋಟಿನ ಕಂತೆಗಳ ಬೃಹತ್ ರಾಶಿ ಕಂಡು ಸ್ವತಃ ಇಡಿ ಅಧಿಕಾರಿಗಳೇ ದಂಗಾಗಿದ್ದಾರೆ. 500 ರುಪಾಯಿ ನೋಟುಗಳೇ ಹೆಚ್ಚಾಗಿ ಇದ್ದವು. ಇದರ ಜೊತೆಯಲ್ಲೇ ಅಪಾರ ಮೌಲ್ಯದ ಆಭರಣಗಳನ್ನೂ ಇ.ಡಿ. ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.