ಬೆಂಗಳೂರು: ರಾಜ್ಯ ಸರ್ಕಾರ ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿ ಸಂಬಂಧ ಹಲವಾರು ಯೋಜನರ್ಗಳನ್ನು ಜಾರಿಗೊಳಿಸಿದ್ದು, ಇದೀಗ ‘ಮಾಂಗಲ್ಯ ಭಾಗ್ಯ’ ಯೋಜನೆ ಬಗ್ಗೆ ಜನರ ಕುತೂಹಲ ಹೆಚ್ಚಾಗಿದೆ. ಈ ನಡುವೆಯೇ, ಮುಜರಾಯಿ ಇಲಾಖೆ ವ್ಯಾಪ್ತಿಯ ಪ್ರವರ್ಗ ‘ಎ’ ಮತ್ತು ‘ಬಿ’ ಅಧಿಸೂಚಿತ ದೇವಾಲಯಗಳಲ್ಲಿ ‘ಮಾಂಗಲ್ಯ ಭಾಗ್ಯ’ ಯೋಜನೆ ಅಡಿ ಸಾಮೂಹಿಕ ವಿವಾಹಗಳ ಆಯೋಜನೆ ಕುರಿತಂತೆ ಸರ್ಕಾರ
‘ಮಾಂಗಲ್ಯ ಭಾಗ್ಯ’ ಯೋಜನೆಯಡಿಯಲ್ಲಿ ವಧು-ವರರಿಗೆ, ತಾಳಿ,ಬಟ್ಟೆ, ಸಹಿತ ಅಗತ್ಯ ವಸ್ತುಗಳ ಖರೀದಿಗಾಗಿ 55,000 ರೂಪಾಯಿಗಳ ಪ್ರೋತ್ಸಾಹ ಧನವನ್ನು ಆದಾಯ ಇರುವ ದೇವಾಲಯಗಳ ನಿಧಿಯಿಂದ ಬಳಸಿಕೊಳ್ಳಲಾಗುವುದು. ಆದಾಯ ಕಡಿಮೆ ಇರುವ ದೇವಾಲಯಗಳಲ್ಲಿ 55,000 ರೂಪಾಯಿ ಪ್ರೋತ್ಸಾಹ ಧನವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ನೀಡಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
‘ಮಾಂಗಲ್ಯ ಭಾಗ್ಯ’ (ಸಾಮೂಹಿಕ ಸರಳ ವಿವಾಹ) ಕಾರ್ಯಕ್ರಮದಡಿ 31.01.2024ರಂದು ನಡೆದ ವಿವಾಹವಾಗಿರುವ ಒಟ್ಟು 139 ಜೋಡಿಗಳ ವಿವರ ಹೀಗಿದೆ:
-
ಶ್ರೀ ವಿದುರಾಶ್ವಥ ನಾರಾಯಣ ದೇವಾಲಯ, ವಿದುರಾಶ್ವಥ, ಚಿಕ್ಕಬಳ್ಳಾಪುರ ಜಿಲ್ಲೆ- ವಿವಾಹವಾದ ಜೋಡಿಗಳು 7
-
ಶ್ರೀ ಮೈಲಾರಲಿಂಗೇಶ್ವರ ದೇವಾಲಯ, ಮೈಲಾರ, ವಿಜಯನಗರ ಜಿಲ್ಲೆ – ವಿವಾಹವಾದ ಜೋಡಿಗಳು 11
-
ಶ್ರೀ ಉತ್ಸವಾಂಬ ದೇವಾಲಯ, ಉಚ್ಚಂಗಿ ದುರ್ಗಾ, ವಿಜಯನಗರ ಜಿಲ್ಲೆ- ವಿವಾಹವಾದ ಜೋಡಿಗಳು -17
-
ಶ್ರೀ ಹುಲಿಗೆಮ್ಮ ದೇವಿ ದೇವಾಲಯ, ಹುಲಿಗಿ ಕ್ಷೇತ್ರ, ಕೊಪ್ಪಳ ತಾಲ್ಲೂಕು/ಜಿಲ್ಲೆ – ವಿವಾಹವಾದ ಜೋಡಿಗಳು – 69
-
ಘಾಟಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ- ವಿವಾಹವಾದ ಜೋಡಿಗಳು – 13
-
ಶ್ರೀ ಮೂಕಾಂಬಿಕಾ ದೇವಾಲಯ, ಕೊಲ್ಲೂರು, ಉಡುಪಿ ಜಿಲ್ಲೆ- ವಿವಾಹವಾದ ಜೋಡಿಗಳು – 5
-
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ದ.ಕ.ಜಿಲ್ಲೆ- ವಿವಾಹವಾದ ಜೋಡಿಗಳು – 6
-
ಶ್ರೀ ಬನಶಂಕರಿ ದೇವಾಲಯ, ಬೆಂಗಳೂರು ನಗರ – ವಿವಾಹವಾದ ಜೋಡಿಗಳು – 1
-
ಶ್ರೀ ಸಿದ್ಧಲಿಂಗೇಶ್ವರ ದೇವಾಲಯ, ಎಡೆಯೂರು, ತುಮಕೂರು ಜಿಲ್ಲೆ- ವಿವಾಹವಾದ ಜೋಡಿಗಳು – 2
-
ಶ್ರೀ ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು, ಮೈಸೂರು ಜಿಲ್ಲೆ – ವಿವಾಹವಾದ ಜೋಡಿಗಳು – 8