ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರು ಇದೀಗ ವಿದೇಶದಲ್ಲಿದ್ದುಕೊಂಡೇ ವೀಡಿಯೋ ಸಂದೇಶ ರವಾನಿಸಿದ್ದಾರೆ.
ತಾವು ವಿದೇಶಕ್ಕೆ ತರಳಿದ ಸಂದರ್ಭದಲ್ಲಿ ಪ್ರಕರಣ ದಾಖಲಿಸಿರಲಿಲ್ಲ ಎನ್ನುವ ಮೂಲಕ ತಾವು ಕೇಸ್ನಿಂದ ಪಾರಾಗಲು ತಲೆಮರೆಸಿಕಂಡಿಲ್ಲ ಎಂಬ ಸ್ಪಷ್ಟನೆ ಪ್ರಜ್ವಲ್ ರೇವಣ್ಣರ ಈ ವೀಡಿಯೋ ಸಂದೇಶದಲ್ಲಿದೆ.
ತಾವು ಮೇ.31ರಂದು ಎಸ್ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿರುವ ಪ್ರಜ್ವಲ್ ರೇವಣ್ಣ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪತ್ರ, ಕುಮಾರಸ್ವಾಮಿ ಅವರ ಮನವಿಯ ಬಗ್ಗೆಯೂ ಪ್ರಸ್ತಪಿಸಿದ್ದಾರೆ. ತಂದೆ-ತಾಯಿ, ತಾತನಿಂದ ಕ್ಷಮೆಕೋರಿರುವ ಪ್ರಜ್ವಲ್, ಜೆಡಿಎಸ್ ಕಾರ್ಯಕರ್ತರಲ್ಲೂ ಕ್ಷಮೆ ಯಾಚಿಸಿದ್ದಾರೆ.