ಉಡುಪಿ : ಬೆಂಗಳೂರು ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ಸ್ವಾತಂತ್ಯೋತ್ಸವದ ಅಮ್ರತ ಮಹೋತ್ಸವದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ದೇಶಭಕ್ತಿ ಗೀತೆಗಳ ವಾಚನಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ 6 ತರಗತಿಯ ವಿಧ್ಯಾರ್ಥಿನಿ ಕುಮಾರಿ ರಿಷಿಕಾ ರಾಮ ದೇವಾಡಿಗ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶಿಕ್ಷಕ ದಂಪತಿ ರೂಪ ಮತ್ತು ರಾಮ ದೇವಾಡಿಗ ಬೈಂದೂರು ಇವರ ಪುತ್ರಿರ ರಿಷಿಕಾ ಅಗಷ್ಟ್ 3 ರಂದು 10 ರವರೆಗೆ ನೆಡೆದ ಈ ದೇಶ ಭಕ್ತಿಗೀತೆಗಳ ವಾಚನಾ ಸ್ಪರ್ಧೆಯಲ್ಲಿ ಹೊರರಾಜ್ಯ ಮತ್ತು ಹೊರದೇಶಗಳ ಮಕ್ಕಳು ಭಾಗವಹಿಸಿದ್ದರು. ಇವರೆಲ್ಲರಿಗಿಂತ ಸ್ಪರ್ಧೆಯಲ್ಲಿ ಸೈ ಎನಿಸಿಕೊಂಡ ರೀಷಿಕಾ ರಾಮ ದೇವಾಡಿಗ ಹೆತ್ತವರಿಗೆ, ವಿಧ್ಯಾಭ್ಯಾಸ ಮಾಡುತ್ತಿರುವ ಶಾಲೆಗೆ ಮತ್ತು ಊರಿನ ಸಮಸ್ತ ನಾಗರೀಕರ ಮೆಚ್ಚುಗೆ ಪಾತ್ರರಾಗಿದ್ದಾಳೆ.