ಬೆಂಗಳೂರು: ಕಾಂಗ್ರೆಸ್ ಪಕ್ಷವು ತಮ್ಮ ಬಗ್ಗೆ ನಕಲಿ ವೀಡಿಯೊ ವೈರಲ್ ಮಾಡಿ ತಮ್ಮ ತೇಜೋವಧೆಗೆ ಯತ್ನಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಈ ಸಂಬಂಧ ಅವರು ಬೆಂಗಳೂರಿನ ಸಿ.ಇ.ಏನ್.ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ತಮ್ಮ ಬಗ್ಗೆ ಮಾರ್ಫ್ ವೀಡಿಯೊ ವೈರಲ್ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ಜನವರಿ 03, 2025 ರಂದು ಬೆಳಿಗ್ಗೆ 11:30 ರ ಸುಮಾರಿಗೆ ಅಶೋಕ್ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿದ್ದಾಗ, ವಿರೋಧ ಪಕ್ಷದ ನಾಯಕನಾಗಿ ನಾನು ಮತ್ತು ಇತರ ಬಿಜೆಪಿ ನಾಯಕರು ಬೆಂಗಳೂರು ನಗರದ ನಿವಾಸಿಗಳು, ಕೆಎಸ್ಆರ್ಟಿಸಿ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಭೇಟಿಯಾಗಿ ಶುಭಾಶಯ ಕೋರುತ್ತಿದ್ದೆವು. ಕರ್ನಾಟಕ ಸರ್ಕಾರವು ಕೆಎಸ್ಆರ್ಟಿಸಿ ಬಸ್ ದರವನ್ನು ಹೆಚ್ಚಿಸಿದ್ದು, ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿಲ್ಲ ಎಂದು ಜನರಿಗೆ ತಿಳಿಸುತ್ತಿದ್ದೆವು. ಹೀಗಿರುವಾಗ, ಕೆಲವು ಪೊಲೀಸ್ ಅಧಿಕಾರಿಗಳು ನಾವು ಸಾರ್ವಜನಿಕರನ್ನು ಭೇಟಿಯಾಗದಂತೆ ತಡೆಯಲು ಪ್ರಯತ್ನಿಸಿದರು. ಈ ಸಮಯದಲ್ಲಿ, ನಾನು ಪ್ರಸ್ತುತ ಸ್ಥಿತಿ ಮತ್ತು ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನಕ್ಕೆ ಅಡ್ಡಿಪಡಿಸದಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ಪೊಲೀಸರು ನನ್ನನ್ನು ಕೆಣಕಿದರು. ಯಾವುದೇ ಕಾನೂನಿನ ಅಧಿಕಾರವಿಲ್ಲದೆ ನನ್ನನ್ನು ತಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ, ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕನಾಗಿದ್ದು, ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸುವ ನನ್ನ ಸಾಂವಿಧಾನಿಕ ಹಕ್ಕಿಗೆ ಅಡ್ಡಿ ಮಾಡಬಾರದು ಮತ್ತು ಹಾಗೆ ಮಾಡುವುದು ಸರಿಯಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೆ.
ಸನ್ನಿವೇಶ ಹೀಗಿರುವಾಗ, INC ಕರ್ನಾಟಕದ ಅಧಿಕೃತ X ಖಾತೆಯಲ್ಲಿ 03.01.2025 ರಂದು ಸಂಜೆ 5:03 ಕ್ಕೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ ಎಂಬ ವಿಷಯ ತಿಳಿದು ನನಗೆ ಆಘಾತವಾಯಿತು. ಅಲ್ಲಿ ನಾನು ಪೊಲೀಸರಿಗೆ ಆಕ್ಷೇಪಾರ್ಹ ವಿಷಯವನ್ನು ಮಾತನಾಡುತ್ತಿದ್ದೇನೆ ಎಂಬಂತೆ ಬಿಂಬಿಸಿ ಮಾರ್ಫ್ ಮಾಡಿದ ವೀಡಿಯೊ ಅದಾಗಿದೆ. ನನ್ನ ಸ್ಥಾನಮಾನವನ್ನು ಕುಗ್ಗಿಸುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು X ಖಾತೆಯಲ್ಲಿ 03.01.2025 ರಂದು ಸಂಜೆ 5:03 ಕ್ಕೆ ಪ್ರಸಾರ ಮಾಡಲಾಗಿದೆ. ಇದರ ಲಿಂಕ್ https://x.com/INCKarnataka/status/1875143416364830934?t=r- MAekr69T2pH4-3Fx wwQ&s=08
ಮಹಿಳೆಯರ ಬಗ್ಗೆ ಬಿಜೆಪಿ ನಾಯಕರಿಗೆ ಎಂತಹಾ ಭಾವನೆ ಇದೆ ಎಂಬುದಕ್ಕೆ ಅವರ ನಾಲಗೆಯೇ ಸಾಕ್ಷಿ ಹೇಳುತ್ತಿದೆ!
ಪರಿಷತ್ ಕಲಾಪದಲ್ಲೇ ಮಹಿಳಾ ಸಚಿವರನ್ನು ಅವಾಚ್ಯವಾಗಿ ನಿಂಧಿಸಿದ @CTRavi_BJP ನಂತರ ಈಗ ವಿಪಕ್ಷ ನಾಯಕ @RAshokaBJP ತನ್ನ ನಾಲಗೆ ಹರಿಬಿಟ್ಟು ‘ಸ್ತ್ರೀ ಕುಲ’ವನ್ನು ಅಪಮಾನಿಸಿದ್ದಾರೆ.
ನೀವು ಹೇಳುವ ‘ಹಿಂದುತ್ವ’ ಇದೇನಾ? ಅಥವಾ… pic.twitter.com/q1xVFufl2Z
— Karnataka Congress (@INCKarnataka) January 3, 2025
ನಾನು ಅಂತಹ ಯಾವುದೇ ಆಕ್ಷೇಪಾರ್ಹ ಪದವನ್ನು ಉಚ್ಚರಿಸಿಲ್ಲ. ನಾನು ವಿರೋಧ ಪಕ್ಷದ ನಾಯಕನಾಗಿದ್ದು ನಾನು ಅಂತಹ ವಿಷಯಗಳಿಗೆ ಬೆಂಬಲ ನೀಡುವುದಿಲ್ಲ. INC ಕರ್ನಾಟಕದ X ಖಾತೆಯಲ್ಲಿ ನಕಲಿ ವೀಡಿಯೊ ಪೋಸ್ಟ್ ಹಾಕಿರುವುದನ್ನು ಗಮನಿಸಿದ ನನ್ನ ಕಚೇರಿಯು ಮೂಲ ವೀಡಿಯೊವನ್ನು X ಖಾತೆಯಲ್ಲಿ 03.01.2025 ರಂದು 20:14 ಗಂಟೆಗೆ ಪೋಸ್ಟ್ ಮಾಡಿದೆ. ಅದರ ಲಿಂಕ್ https://x.com/RAshokaB.JP/status/1875191577733394898?t=0FqsnaHTIZVj wu3_YwksHQ&s=08
ಪೊಲೀಸರಿಗೆ ನೀಡಿರುವ ದೂರಿನ ಬಗ್ಗೆ ಬಿಜೆಪಿ ಹಿರಿಯ ನಾಯಕರೂ ಆದ ಆರ್.ಅಶೋಕ್ ಅವರು ಸಾಮಾಜಿಕ ಜಾಲತಾಣ ರ್ಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ವೈಫಲ್ಯಗಳು ಮತ್ತು ಆಂತರಿಕ ಜಗಳದಿಂದ ಗಮನ ಬೇರೆಡೆ ಸೆಳೆಯಲು, ಕಾಂಗ್ರೆಸ್’ನ ನಕಲಿ ಸುದ್ದಿ ಕಾರ್ಖಾನೆಯು ಬಸ್ ದರ ಏರಿಕೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಾನು ಆಕ್ಷೇಪಾರ್ಹ ಪದವನ್ನು ಹೇಳಿದ್ದೇನೆ ಎಂದು ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಈ ಟ್ವೀಟ್’ನಲ್ಲಿ ಅಶೋಕ್ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ಕೊಳಕು ತಂತ್ರಗಳನ್ನು ನಿರ್ವಹಿಸುವವರು ನನ್ನ ಖ್ಯಾತಿಗೆ ಧಕ್ಕೆ ತರಲು ನಕಲಿ ಮತ್ತು ತಿರುಚಿದ ವೀಡಿಯೊಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪ್ರತಿಯೊಂದು ಪ್ರಕರಣಕ್ಕೂ ಕಾನೂನು ವಿಧಾನಗಳ ಮೂಲಕ ಪ್ರತಿಕ್ರಿಯಿಸುತ್ತೇನೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಕೋಶದ ನಾಯಕರ ವಿರುದ್ಧ ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದೇನೆ ಮತ್ತು ಅಪರಾಧಿಗಳನ್ನು ಬಿಡಲಾಗುವುದಿಲ್ಲ ಎಂದು ಅಶೋಕ್ ಸಾರಿದ್ದಾರೆ.
In order to distract from its failures and internal tussle, since yesterday, @INCKarnataka‘s fake news factory is trying to misguide the public that I uttered an objectionable word during yesterday’s protest against bus fare hike.
It is very clear that the managers of… pic.twitter.com/TN7rN2Bj1P
— R. Ashoka (@RAshokaBJP) January 4, 2025
ಐವರು ಕಾಂಗ್ರೆಸ್ ನಾಯಕರ ವಿರುದ್ಧ ತನಿಖೆಗೆ ಆಗ್ರಹ:
ಕಾಂಗ್ರೆಸ್ ಪಕ್ಷವು ಸುಳ್ಳು, ದಾರಿತಪ್ಪಿಸುವ ಮತ್ತು ದುರುದ್ದೇಶಪೂರಿತ ಕೃತ್ಯ ನಡೆಸಿದ್ದು, ಬಿಜೆಪಿ ಪಕ್ಷ ಮತ್ತು ಪೊಲೀಸ್ ಇಲಾಖೆಯ ನಡುವೆ ದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದೆ. ಇದಲ್ಲದೆ, ಸುಳ್ಳು ಮತ್ತು ದಾರಿತಪ್ಪಿಸುವ ಈ ವೀಡಿಯೊ ಪೊಲೀಸ್ ಇಲಾಖೆಯ ವಿರುದ್ಧ ದ್ವೇಷವನ್ನು ಹರಡಲು ಸಾರ್ವಜನಿಕರನ್ನು ಪ್ರಚೋದಿಸುವಂತಿದೆ. ಈ ಸುಳ್ಳು ಮಾಹಿತಿ ಮತ್ತು ಹೇಳಿಕೆಯನ್ನು ಪ್ರಕಟಿಸಿ, ವಿರೋಧ ಪಕ್ಷದ ನಾಯಕರ ಕಚೇರಿಯನ್ನು ಕೆಣಕುವ ಸ್ಪಷ್ಟ ಉದ್ದೇಶ ಕಾಂಗ್ರೆಸ್ ಪಕ್ಶದ್ದಾಗಿದೆ. ಸಾರ್ವಜನಿಕರ ಮುಂದೆ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಮತ್ತು ಖ್ಯಾತಿಯನ್ನು ಕುಗ್ಗಿಸಲು ದುರುದ್ದೇಶಪೂರಿತ ಪದಗಳಿಂದ ತುಂಬಿದ ಮಾರ್ಫ್ ಮಾಡಿದ ವೀಡಿಯೊವನ್ನು ಪ್ರಸಾರ ಮಾಡಿಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಈ ನೆಲದ ಕಾನೂನಿಗೆ ವಿರುದ್ಧವಾಗಿನಡೆದುಕೊಂಡಿದ್ದಾರೆ. ಹಾಗಾಗಿ INC ಕರ್ನಾಟಕ ಮಾಧ್ಯಮ ಮತ್ತು ಸಂವಹನಗಳ ಅಧ್ಯಕ್ಷ ರಮೇಶ್ ಬಾಬು, INC ಕರ್ನಾಟಕ ಮಾಧ್ಯಮ ಮತ್ತು ಸಂವಹನಗಳ ಸಹ-ಅಧ್ಯಕ್ಷೆ ಐಶ್ವರ್ಯ ಮಹಾದೇವ್, INC ಕರ್ನಾಟಕ ಮಾಧ್ಯಮ ಮತ್ತು ಸಂವಹನಗಳ ಉಪಾಧ್ಯಕ್ಷ ಸತ್ಯಪ್ರಕಾಶ್, INC ಕರ್ನಾಟಕ ಸೋಶಿಯಲ್ ಮೀಡಿಯಾ ಸಹ ಅಧ್ಯಕ್ಷ- ವಿಜಯ್ ಮತ್ತಿಕಟ್ಟಿ, INC ಕರ್ನಾಟಕ ಸಾಮಾಜಿಕ ಮಾಧ್ಯಮ ಸಹ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ ವಿರುದ್ಧ BNS ನ ಸೆಕ್ಷನ್ 353 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 66A, 66E ಮತ್ತು 67 ರ ಅಡಿಯಲ್ಲಿ FIR ದಾಖಲಿಸಿ, ತನಿಖೆ ನಡೆಸಬೇಕೆಂದು ಆರ್.ಅಶೋಕ್ ತಮ್ಮ ದೂರಿನಲ್ಲಿ ಕೋರಿದ್ದಾರೆ.