ಬೆಂಗಳೂರು: ಶ್ರಾವಣ ಸಂದರ್ಭದಲ್ಲಿ ದೇವಾಲಯ ಯಾತ್ರೆ ಕೈಗೊಳ್ಳುವ ಆಸ್ತಿಕರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸ ಟೂರ್ ಪ್ಯಾಕೇಜ್ ಪ್ರಕಟಿಸಿದೆ. ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜನ್ನು KSRTC ಟೂರ್ ಘೋಷಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಶಿವಗಂಗೆ-ಸಿದ್ಧಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಮಾರ್ಗದಲ್ಲಿ ಅಶ್ವಮೇಧ ಕ್ಲಾಸಿಕ್ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಪ್ರತಿ ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರನ್ನು (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) 26-07-2025 ರಿಂದ ಪ್ರಾರಂಭಿಸಿದೆ.
ಸಾರ್ವಜನಿಕ ಪ್ರಯಾಣಿಕರು ಮೇಲೆ ತಿಳಿಸಿರುವ ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯಕ್ಕಾಗಿ ಟಿಕೇಟ್ ಪಡೆಯಲು www.ksrtc.in & www.ksrtc.karnataka.gov.in ವೆಬಸೈಟ್ ಅಥವಾ ದೂರವಾಣಿ ಸಂಖ್ಯೆ 080-26252625/7760990100/7760990560/7760990287 ಯನ್ನು ಸಂಪರ್ಕಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.