ಧೂಳೆ (ಮಹಾರಾಷ್ಟ್ರ): ಕಾಂಗ್ರೆಸ್ಗೆ ಕಳುಹಿಸಲು ಅದಾನಿ ಮತ್ತು ಅಂಬಾನಿ ಟೆಂಪೋಗಳಲ್ಲಿ ಹಣ ತುಂಬುತ್ತಿದ್ದಾಗ ನೀವು ನಿದ್ದೆ ಮಾಡುತ್ತಿದ್ದೀರಾ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.
ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ಪಕ್ಷಕ್ಕೆ ಟೆಂಪೋಗಳಲ್ಲಿ ಹಣ ಕಳುಹಿಸುತ್ತಿರುವುದರಿಂದ ಅದಾನಿ ಮತ್ತು ಅಂಬಾನಿ ವಿರುದ್ಧ ಮಾತನಾಡುವುದನ್ನು ಕಾಂಗ್ರೆಸ್ ನಿಲ್ಲಿಸಿದೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ಅದಾನಿ ಮತ್ತು ಅಂಬಾನಿಗೆ ಟೆಂಪೋಗಳಲ್ಲಿ ಕಾಂಗ್ರೆಸ್ಗೆ ಹೇಗೆ ಹಣ ಕಳುಹಿಸಬಹುದು ಎಂದು ತನಿಖೆ ನಡೆಸಲು ಇಡಿ, ಆದಾಯ ತೆರಿಗೆ ಮತ್ತು ಸಿಬಿಐ ತಂಡಗಳನ್ನು ಕಳುಹಿಸುವಂತೆ ಮೋದಿಗೆ ಖರ್ಗೆ ಸವಾಲು ಹಾಕಿದರು.
ಇಡಿ, ಆದಾಯ ತೆರಿಗೆ ಮತ್ತು ಸಿಬಿಐ ಅನ್ನು ಬಳಸಿಕೊಂಡು ಮೋದಿ ಸರ್ಕಾರ ಹೇಗೆ ಕೇಸುಗಳನ್ನು ಹಾಕಿ ಸುಮಾರು 800 ಜನರನ್ನು ಬಂಧಿಸಿದೆ ಎಂದು ಖರ್ಗೆ ಆರೋಪಿಸಿದರು. ಅಶೋಕ್ ಚವಾಣ್ ಮತ್ತು ಅಜಿತ್ ಪವಾರ್ ಅವರಂತಹ ನಾಯಕರು ಭಯದಿಂದ ಮೋದಿಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಬೇಕಾಯಿತು ಎಂದರು.
ಪ್ರಸ್ತುತ ಚುನಾವಣೆ ಸಾಮಾನ್ಯ ಚುನಾವಣೆಯಲ್ಲ, ದೇಶದ ಭವಿಷ್ಯವೇ ಅಪಾಯದಲ್ಲಿದೆ ಎಂದ ಕಾಂಗ್ರೆಸ್ ಅಧ್ಯಕ್ಷರು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಸಂವಿಧಾನ ಬದಲಾದರೆ ಮತದಾನದ ಹಕ್ಕು ಸೇರಿದಂತೆ ಎಲ್ಲವೂ ಮುಗಿದು ಹೋಗುತ್ತದೆ ಎಂದು ಎಚ್ಚರಿಸಿದರು.
70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪದೇ ಪದೇ ಕೇಳುವ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡ ಅವರು, ನಾವು ದೇಶವನ್ನು ಉಳಿಸಿದ್ದೇವೆ ಮತ್ತು ರಕ್ಷಿಸಿದ್ದೇವೆ ಎಂದು ಉತ್ತರಿಸಿದರು. “ನಾವು ಪಾಕಿಸ್ತಾನವನ್ನು ವಿಭಜಿಸಿ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ್ದೇವೆ” ಎಂದೂ ಅವರು ಹೇಳಿದರು, ಇಂದಿರಾ ಗಾಂಧಿಯವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. “ನೀನು ಏನು ಮಾಡಿದ್ದೀರಿ?” ಎಂದು ಮೋದಿಯನ್ನು ಪ್ರಶ್ನಿಸಿದರು.
ಎಲ್ಲಾ ಸುಳ್ಳುಗಾರರ ಸರದಾರ ಎಂಬ ಪ್ರಧಾನಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಅವರು, ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತೇನೆ ಅಥವಾ 2 ಕೋಟಿ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳುತ್ತಿದ್ದರು. ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು. ಇವುಗಳಲ್ಲಿ ಯಾವುದನ್ನಾದರೂ ಮಾಡಿದ್ದಾರೆಯೇ?” ಅವರು ಪ್ರಶ್ನಿಸಿದರು,
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಸಂಕಲ್ಪ ಮಾಡಿದ ಖರ್ಗೆ, ಪ್ರತೀ ಬಡ ಕುಟುಂಬಕ್ಕೆ ಪ್ರತೀ ವರ್ಷ ಒಂದು ಲಕ್ಷ ರೂ.ಗಳನ್ನು ಒದಗಿಸುವುದು, ರೈತರ ಸಾಲವನ್ನು ಮನ್ನಾ ಮಾಡುವುದು ಮತ್ತು ಎಂಎಸ್ಪಿಗೆ ಕಾನೂನು ಗ್ಯಾರಂಟಿ ನೀಡುವುದು ಮತ್ತು ಕೃಷಿ ಉಪಕರಣಗಳನ್ನು ಜಿಎಸ್ಟಿಯಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದರು.