📝 ರಾಘವೇಂದ್ರ ಗಂಜಾಮ್
ಸಕ್ಕರೆನಾಡು ಮಂಡ್ಯದಲ್ಲಿ ಹನುಮ ಜಯಂತಿ ಅಂಗವಾಗಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ವಿಜೃಂಭಣೆಯಿಂದ ಹನುಮ ಜಯಂತಿ ಆಚರಿಸಿ ಹನುಮನ ಸಂಕೀರ್ತನಾ ಯಾತ್ರೆ ನೆರವೇರಿತು.
ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಬೃಹತ್ ಸಂಕೀರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಭಕ್ತರು ಶ್ರೀರಂಗಪಟ್ಟಣಕ್ಕೆ ಹನುಮ ಮಾಲಾಧಾರಿಗಳಾಗಿ ವಿವಿಧ ವಾಹನಗಳ ಮೂಲಕ ಶ್ರೀರಂಗಪಟ್ಟಣದ ಗಂಜಾಮ್ ಬಳಿ ಇರುವ ಹನುಮ ದೇವಾಲಯ ಬಳಿ ಜಮಾವಣೆಗೊಂಡು ಪಟ್ಟಣದ ಮೂಡಲ ಬಾಗಿಲು ಆಂಜನೇಯ ದೇಗುಲದ ವರೆಗೂ ಸಂಕೀರ್ತನಾ ಯಾತ್ರೆ ನಡೆಸಿದ್ರು. ಈ ಯಾತ್ರೆಯಲ್ಲಿ ಸಾವಿರಾರು ಹನುಮ ಭಕ್ತರು ಹನುಮ ಕೇಸರಿ ಧ್ವಜದೊಂದಿಗೆ ಹನುಮ ಜೈಕಾರದ ಜೊತೆ ರಾಮ ಜಪ ಜಪಿಸಿತ್ತಾ ಪಾಲ್ಗೊಂಡ್ರು. ಸಂಕೀರ್ತನಾ ಯಾತ್ರೆ ಮೆರವಣಿಗೆ ವೇಳೆ ಕೆಲವರು ಅಪ್ಪು ಭಾವ ಚಿತ್ರಪ್ರದರ್ಶನ ಮಾಡಿ ಅಗಲಿದ ಅಪ್ಪುಗೆ ಶ್ರದ್ದಾಂಜಲಿ ಸಲ್ಲಿಸಿದ್ದು ವಿಶೇಷವಾ ಗಿತ್ತು.ಅಲ್ದೆ ಈ ಯಾತ್ರೆಯಲ್ಲಿ ಚಿಕ್ಕ ವಯಸ್ಸಿನ ಬಾಲಕರಿಂದ ಹಿಡಿದು ವೃದ್ದರು ಕೂಡ ಹನುಮ ಮಾಲಾಧಾರಿಗಳಾಗಿ ಈ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡರು.
ಹನುಮಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ಸಾಗುವ ಮಾರ್ಗದ ಉ ದ್ದಕ್ಕೂಕೇಸರಿ ಧ್ವಜಗಳು ರಾಜಾಜಿಸಿದ್ರೆ, ಹನುಮ ಮಾಲಾ ಧಾರಿಗಳ ಸಂಕೀರ್ತನಾ ಯಾತ್ರೆಯಿಂದ ಪಟ್ಟಣದಲ್ಲಿರುವ ಜಾಮೀಯಾ ಮಸೀದಿಗೆ ಕಟಂಕವಾಗಲಿದೆ ಎಂಬ ಪ್ರಗತಿಪರರ ಆರೋಪದ ಹಿನ್ನೆಲೆಯಲ್ಲಿ ಈ ಬಾರೀ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಗಿತ್ತು. ಸಂಕೀರ್ತನಾ ಯಾತ್ರೆ ಸಾಗಿದ ದಾರಿಯುದ್ದಕ್ಕೂ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.