ಗದಗ: ಶಾಸಕರೇ ಖುದ್ದಾಗಿ ಕೋವಿಡ್ ಕೇಂದ್ರದಲ್ಲಿ ಸೋಂಕಿತ ಬಾಲಕನ ಹುಟ್ಟುಹಬ್ಬ ಆಚರಣೆ ಮಾಡಿ ನಡೆ ಎಲ್ಲರ ಗಮನಸೆಳೆದಿದೆ. ಗದಗ ಜಿಲ್ಲೆ ಲಕ್ಷೇಶ್ವರ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ಇದಕ್ಕೆ ಸಾಕ್ಷಿಯಾಗಿದೆ.
ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ರೀತಿ ಜಾನಪದ ಹಾಡುವಗಳ ಹಾಡುವ ಮೂಲಕ ಸಂಭ್ರಮದ ಸನ್ನಿವೇಶ ಸೃಷ್ಟಿಸಲಾಗಿತ್ತು.
ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದ ದಂಪತಿ ಮತ್ತು ಮಕ್ಕಳಿಬ್ಬರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಸೋಂಕಿತ ಮಗುವಿನ ಜನ್ಮದಿನ ಇರುವದನ್ನು ಮನಗಂಡ ಶಾಸಕ ರಾಮಣ್ಣ ಲಮಾಣಿ ಅವರು ತಕ್ಷಣ ಹೊಸಬಟ್ಟೆ ಹಾಗೂ ಕೇಕ್ ತರಿಸಿ ಸೋಂಕಿತ ಮಗುವಿನ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಅನಾರೋಗ್ಯ, ಮಾನಸಿಕ ಚಿಂತೆ ನಡುವೆಯೂ ಮಗುವಿನ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ತಂದೆ ತಾಯಿಯ ಕಣ್ಣಲ್ಲಿ ತಮ್ಮ ಮಗನ ಹುಟ್ಟು ಹಬ್ಬ ಸಂಭ್ರಮ ಕಂಡು ಆನಂದ ಭಾಷ್ಪ ಹರಿಸಿದ್ದಾರೆ.
ಅಧಿಕಾರಿಗಳು ಹಾಗೂ ಸೋಂಕಿತರ ನಡುವೆ ಪುಟ್ಟ ಮಗುವಿನ ಜನ್ಮದಿನಾಚರಣೆ ಮಾಡುವ ಮೂಲಕ ಮಾನವೀಯ ಮೆರೆದ ಶಾಸಕ ರಾಮಣ್ಣ ಲಮಾಣಿ ಅವರು ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.