ಬೆಂಗಳೂರು: ತಮ್ಮ ನಡೆಗೆ ಅಡ್ಡವಾಗಿರುವವರನ್ನು ಸಿದ್ದರಾಮಯ್ಯ ಅವರು ಸಹಿಸಲಾರರು ಎಂದು ಪ್ರತಿಪಕ್ಷ ಬಿಜೆಪಿ ವ್ಯಾಖ್ಯಾನಿಸಿದೆ. ಖರ್ಗೆಯವರನ್ನು ರಾಜ್ಯದಿಂದಲೇ ಓಡಿಸಿದಿರಿ, ಸಿಎಂ ಸ್ಥಾನಕ್ಕೆ ಕುತ್ತಾಗಬಹುದೆಂದು ಆ ನಾಯಕನನ್ನೇ ಹೊರಗಟ್ಟಿದಿರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮಾಡಿರುವ ಗಂಭೀರ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲಕಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
‘ಮಾನ್ಯ ಸಿದ್ದರಾಮಯ್ಯ ಅವರೇ, ನಿಮಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ಅಷ್ಟೊಂದು ದ್ವೇಷವೇಕೆ? ಕರ್ನಾಟಕದ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಬಿಡದೆ ರಾಜ್ಯದಿಂದಲೇ ಓಡಿಸಿಬಿಟ್ಟೀರಿ. ಡಾ.ಪರಮೇಶ್ವರ್ ಅವರನ್ನೂ ಅವರಿಗೆ ಗೊತ್ತೇ ಆಗದಂತೆ ಚುನಾವಣೆಯಲ್ಲಿ ಸೋಲಿಸಿ ಮುಖ್ಯಮಂತ್ರಿ ಸ್ಥಾನದಿಂದ ವಂಚಿಸಿದೀರಿ. ಮಾಜಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮುಂದಿನ ದಿನಗಳಲ್ಲಿ ನಿಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತಾಗಬಹುದೆಂದು ಅವರನ್ನು ಪಕ್ಷದಿಂದ ಹೊರ ಹೋಗುವಂತೆ ಮಾಡಿದೀರಿ’ ಎಂದು ಬಿಜೆಪಿ ಪಕ್ಷವು ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿದೆ.
‘ಈಗ ST ಸಮುದಾಯದ 187ಕೋಟಿ ರೂ.ಗಳನ್ನು ಅನಾಮತ್ತಾಗಿ 100 ಪರ್ಸೆಂಟ್ ಕೊಳ್ಳೆ ಹೊಡೆದಿದ್ದೀರಿ. ಜತೆಗೆ SC ಸಮುದಾಯದ ಅಭಿವೃದ್ಧಿಗೆ ಮೀಸಲಿದ್ದ ಸುಮಾರು 30 ಸಾವಿರ ಕೋಟಿ ರೂ ಗಳನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ. ಶೋಷಿತ, ಹಿಂದುಳಿದ ಸಮಾಜವೆಂದರೆ ಯಾಕಿಷ್ಟು ಕೋಪ, ದ್ವೇಷ, ಸಿಟ್ಟು ಸಿದ್ದರಾಮಯ್ಯನವರೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಮಾನ್ಯ @siddaramaiah ಅವರೇ, ನಿಮಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ಅಷ್ಟೊಂದು ದ್ವೇಷವೇಕೆ? ಕರ್ನಾಟಕದ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡಿದ್ದ ಶ್ರೀಯುತ @kharge ಅವರನ್ನೂ ಬಿಡದೆ ರಾಜ್ಯದಿಂದಲೇ ಓಡಿಸಿಬಿಟ್ಟೀರಿ.@DrGParameshwara ಅವರನ್ನೂ ಅವರಿಗೆ ಗೊತ್ತೇ ಆಗದಂತೆ ಚುನಾವಣೆಯಲ್ಲಿ ಸೋಲಿಸಿ ಮುಖ್ಯಮಂತ್ರಿ ಸ್ಥಾನದಿಂದ…
— BJP Karnataka (@BJP4Karnataka) July 19, 2024