ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಸಮಾರಂಭ ಇದೀ ದೇಶದಲ್ಲಿ ಹಬ್ಬದ ಉತ್ಸಾಹಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ವಿಚಾರದಲ್ಲಿ ರಾಜಕೀಯ ಕೆಸರೆರಚಾಟವೂ ನಡೆದಿದೆ. ಇಂತಹಾ ಪ್ರಸಂಗದ ನಡುವೆ ಅಚಾನಕ್ ಆಗಿ ನಡೆದ ಘಟನೆ ಬೆಚ್ಚಿಬೀಳಿಸುವಂತಿದೆ.
ಬಿಹಾರದ ದಿಹುರಿ ಎಂಬಲ್ಲಿನ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಷಣಕಾರರು ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಕುರಿತು ಟೀಕಿಸುತ್ತಿದ್ದಾಗ ವೇದಿಕೆಯೇ ಕುಸಿದುಬಿದ್ದಿದೆ. ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಸ್ಥಳೀಯ ಮುಖಂಡರೊಬ್ಬರು ಮಾತನಾಡುತ್ತಾ, ಜನವರಿ 22ರ ಶ್ರೀ ರಾಮಚಂದ್ರ ಜೀ ಅವರ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಮತ ಸೆಳೆಯಲು ಆಯೋಜಿಸಲಾಗಿದೆ ಎಂದು ಟೀಕಿಸುತ್ತಿದ್ದಂತೆಯೇ ವೇದಿಕೆ ಕುಸಿದು ಬಿದ್ದಿದೆ. ಆರ್ಜೆಡಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಸಹಿತ ಹಲವು ಪ್ರಮುಖರು ವೇದಿಕೆಯಲ್ಲಿದ್ದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
A gathering to pay tribute to freedom fighter Qaiyum Ansari in presence of former MP Ali Anwar Ansari was going on in gaya.
As soon as questions on credibility of Prana Pratishtha of Ram Mandir were raised- The Stage collapsed pic.twitter.com/Lcu68nv52t
— साबू 2.0 ठाकुर साहब 2.0💯 ✌️#Parody Account (@Sabu4mjupitor) January 19, 2024

























































