ಪ್ರತಿಷ್ಠಿತ ‘ಶೆಫ್ಟಾಕ್’ ಸಂಸ್ಥೆಗೆ ರಾಷ್ಟ್ರೀಯ ಪುರಸ್ಕಾರ.. 140ಕ್ಕೂ ಹೆಚ್ಚು ಕಂಪನಿಗಳಿಗೆ ಚೈತನ್ಯ ತುಂಬುತ್ತಿರುವ ಗೋವಿಂದ ಬಾಬು ಪೂಜಾರಿ ಸಾಧನೆಯ ಜೊತೆಗೆ ರಾಷ್ಟ್ರೀಯ ಪ್ರಶಸ್ತಿಯ ಆಕರ್ಷಣೆ.. ಇಂದಿರಾ ಕ್ಯಾಂಟೀನ್ ಅವಲಂಬಿತರಿಗೂ ಹೆಮ್ಮೆಯ ಸಂಗತಿ..
ದೆಹಲಿ: ದಕ್ಷಿಣ ಭಾರತದ ಪ್ರತಿಷ್ಠಿತ ‘ಶೆಫ್ಟಾಕ್’ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಗರಿ ಆಕರ್ಷಣೆ ತಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರುನಾಡಿನ ‘ಕಾರ್ಮಿಕರತ್ನ’ ಖ್ಯಾತಿಯ ಉದ್ಯಮಿ, ChefTalk’ ಕಂಪನಿಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಕರ್ನಾಟಕ ಸರ್ಕಾರಕ್ಕೂ ಹೆಮ್ಮೆ
ಬೆಂಗಳೂರು ಮೂಲದ ‘ಶೆಫ್ಟಾಕ್’ ಕಂಪನಿಗೆ ಈ ಪುರಸ್ಕಾರ ಸಂದಿರುವುದು ರಾಜ್ಯ ಸರ್ಕಾರಕ್ಕೂ ಹೆಮ್ಮೆಯ ಸಂಗತಿ. ಮಾಹಿತಿ ತಂತ್ರಜ್ಞಾನ, ಉತ್ಪಾದನಾ ವಲಯ, ಹಾಸ್ಪಿಟಲ್ಸ್ ಹೀಗೆ ಹಲವಾರು ವಲಯಗಳಲ್ಲಿ ಉದ್ದಿಮೆಯ ವಿಸ್ತಾರ ಹೊಂದಿರುವ ಶೆಫ್ಟಾಕ್ ಮಾಲೀಕರರಾದ 140ಕ್ಕೂ ಹೆಚ್ಚು ಕಂಪನಿಗಳಿಗೆ ಮುಂಚೂಣಿ ಸೇವೆ ಕಲ್ಪಿಸುತ್ತಿದ್ದಾರೆ.
ಅಷ್ಟೇ ಅಲ್ಲ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪೂರೈಸುತ್ತಿರುವ ‘ಶೆಫ್ಟಾಕ್’ (Cheftalk Food And Hospitality Services Pvt.Ltd) ಸಂಸ್ಥೆ, ನಿತ್ಯವೂ ಸಾವಿರಾರು ಮಂದಿಯ ಹಸಿವು ನೀಗುತ್ತಿದೆ. ಅದರಲ್ಲೂ ಅಗ್ಗ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಸರ್ಕಾರದ ಪ್ರಯತ್ನವನ್ನು ಈ ರಾಷ್ಟ್ರೀಯ ಮಟ್ಟದ ಪುರಸ್ಕಾರ ಪ್ರಮಾಣೀಕರಿಸಿದೆ ಎಂಬ ಮೆಚ್ಚುಗೆ ಅಧಿಕಾರಿಗಳಿಂದ ವ್ಯಕ್ತವಾಗಿದೆ.
ದೆಹಲಿಯ ‘ಇಂಟರ್ನ್ಯಾಷನಲ್ ಅಚಿವರ್ಸ್ ಕಾನ್ಫರೆನ್ಸ್’ ಸಮಾರಂಭದಲ್ಲಿ ಈ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ‘ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ಈ ಪುರಸ್ಕಾರವನ್ನು ಪ್ರದಾನ ಮಾಡಬೇಕಿತ್ತು. ಆದರೆ ಕೋವಿಡ್ ಪರಿಸ್ಥಿತಿ ಹಿನ್ನೆಲೆ ಕಾರ್ಯಕ್ರಮದ ಸ್ವರೂಪ ಬದಲಾಗಿತ್ತು.
ಪ್ರಶಸ್ತಿ ಸ್ವೀಕರಿಸಿರುವ ‘ಶೆಫ್ಟಾಕ್’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿಯವರು, ಇದು ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ 6000 ಸಿಬ್ಬಂದಿಯ ಪ್ರಯತ್ನಕ್ಕೆ ಸಂದ ಪುರಸ್ಕಾರ ಎಂದು ಪ್ರತಿಕ್ರಿಯಿಸಿದ್ದಾರೆ.