ಮಂಗಳೂರು: ತಮಿಳುನಾಡು ರಾಜಕೀಯದಲ್ಲಿ ಕುತೂಹಲದ ಕೇಂದ್ರಬಿಂದುವಾಗಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇದೀಗ ಕರ್ನಾಟಕದ ಕರಾವಳಿಯಲ್ಲಿ ಸವಾರಿ ಕೈಗೊಂಡಿದ್ದಾರೆ. ಬಿಜೆಪಿ ನಾಯಕಾರಾಗಿರುವ ಅಣ್ಣಾಮಲೈ ಮಂಗಳೂರಿನ ಕಾರ್ಯಕರ್ತರ ಪಾಲಿಗೂ ಸ್ಫೂರ್ತಿಯಂತಿದ್ದಾರೆ.
ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರ ಅಭಿವೃದ್ಧಿ ಬಗ್ಗೆ ರಾಜ್ಯ ರಾಜಕಾರಣದ ಚಿತ್ತ ನೆಟ್ಟಿದೆ. ನಿಷ್ಟೂರ ರಾಜಕಾರಣಿಯಾಗಿರುವ ರಾಜೇಶ್ ನಾಯ್ಕ್ ಅವರದ್ದು ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲೂ ರಾಜಿಯಿಲ್ಲದ ನಡೆ ಎಂಬುದು ರಾಜಕೀಯ ಪಂಡಿತರ ಪ್ರತಿಪಾದನೆ. ಇದೀಗ ಚುನಾವಣೆಯ ಹೊಸ್ತಿಲಲ್ಲಿ ಗ್ರಾಮಗಳ ಸಮಸ್ಯೆ ತಿಯುವ ಸಂಬಂಧ ಪಾದಯಾತ್ರೆ ಕೈಗೊಂಡಿರುವ ಶಾಸಕ ರಾಜೇಶ್ ನಾಯ್ಕ್ ಅವರು ರಾಜಕೀಯ ವಲಯದಲ್ಲೂ ಕೌತುಕದ ಕೇಂದ್ರಬಿಂದುವಾಗಿದ್ದಾರೆ.
ಬಂಟ್ವಾಳ ಶಾಸಕರ ಅಭಿವೃದ್ಧಿ ಕೆಲಸ ಇದೀಗ ದಕ್ಷಿಣ ಭಾರತದಲ್ಲಿ ಮಾದರಿ ಎಂಬಂತಿದ್ದು, ಕ್ಷೇತ್ರದಲ್ಲೀಗ ರಾಜೇಶ್ ನಾಯ್ಕ್ ಜನರ ನಡುವೆ ‘ಅಣ್ಣಾ’ ಎಂದೇ ಗುರುತಾಗಿದ್ದಾರೆ. ಇದೇ ರಾಜೇಶ್ ನಾಯ್ಕ್ ಅವರಿಂದ ಪ್ರೇರಿತರಾಗಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಂಗಳೂರಿಗೆ ದೌಡಾಯಿಸಿ ಬಂಟ್ವಾಳ ಶಾಸಕರನ್ನು ಭೇಟಿಯಾಗಿದ್ದಾರೆ.
ಇಂದು ಅವರು ನಾಡಿನ ಅಧಿದೇವತೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲಕ್ಕೆ ಭೇಟಿ ನೀಡಿದಾಗ ಭಾರೀ ಸಂಖ್ಯೆಯಲ್ಲಿ ಯುವಜನರು ಜಮಾಯಿಸಿದ್ದರು. ಶಾಸಕ ರಾಜೇಶ್ ನಾಯಕ್ ಜೊತೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲಕ್ಕೆ ಭೇಟಿ ನೀಟಿದ ಅಣ್ಣಾಮಲೈ ಅವರನ್ನು ದೇಗುಲದ ಪುರೋಹಿತರು ಹಾಗೂ ಆಡಳಿತ ಮಂಡಳಿಯವರು ಸನ್ಮಾನಿಸಿದರು.
ಮಂಗಳೂರು ಭೇಟಿಯ ನಡುವೆ ಅಣ್ಣಾಮಲೈ ಅವರು ಶುಕ್ರವಾರ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಗ್ರಾಮ ವಿಕಾಸ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.