ಬೆಂಗಳೂರು: ಮೈಸೂರು ವಿಮಾನ ನಿಲ್ಧಾಣಕ್ಕೆ ಟಿಪ್ಪು ಹೆಸರಿಡಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂಪಾಯಿ ಅನುದಾನ ನೀಡುತ್ತೇವೆ ಎಂದು ಹೇಳಿದ್ದಲ್ಲದೆ, ಈಗ ಸಿಎಂ ಸಿದ್ದರಾಮಯ್ಯ ಅವರು, ಮೈಸೂರು ವಿಮಾನ ನಿಲ್ದಾಣಕ್ಕೆ ಮತಾಂಧ ಟಿಪ್ಪುವಿನ ಹೆಸರಿಡಬೇಕೆಂಬುದನ್ನು ತಮ್ಮ ಆಪ್ತ ಶಾಸಕ ಪ್ರಸಾದ್ ಅಬ್ಬಯ್ಯರವರ ಮೂಲಕ ಹೇಳಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಈ ಕುರಿತಂತೆ ಬಿಜೆಪಿ ಮಾಡಿರುವ ಟ್ವೀಟ್ ಗಮನಸೆಳೆದಿದೆ.
ಇದು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣದ ಪರಮಾವಧಿ. ಹಿಂದೂಗಳನ್ನು ಕ್ರೂರವಾಗಿ ಕೊಂದು, ಮೈಸೂರು ರಾಜಮನೆತನವನ್ನು ನಾಶಗೊಳಿಸಿದ ಮತಾಂಧನ ಹೆಸರನ್ನು ಯಾವ ಪುರುಷಾರ್ಥಕ್ಕಾಗಿ ವಿಮಾನ ನಿಲ್ದಾಣದ ಹೆಸರಾಗಿಸಬೇಕು ಎಂದು ಪ್ರಶ್ನಿಸಿರುವ ಬಿಜೆಪಿ, ತುಷ್ಟೀಕರಣದ ರಾಜಕಾರಣಕ್ಕಾಗಿ ಸರ್ಕಾರಿ ಕಟ್ಟಡಗಳಿಗೆ ಮತಾಂಧರ ಹೆಸರಿಟ್ಟರೆ ಅದು ನಮ್ಮ ಹೆಮ್ಮೆಯ ನಾಡಿಗೆ ಮಾಡುವ ಅತಿ ದೊಡ್ಡ ದ್ರೋಹ ಎಂದಿದೆ.
ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಅನುದಾನ ನೀಡುತ್ತೇವೆ ಎಂದು ಹೇಳಿದ್ದಲ್ಲದೆ, ಈಗ ಸಿಎಂ @siddaramaiah ಅವರು, ಮೈಸೂರು ವಿಮಾನ ನಿಲ್ದಾಣಕ್ಕೆ ಮತಾಂಧ ಟಿಪ್ಪುವಿನ ಹೆಸರಿಡಬೇಕೆಂಬುದನ್ನು ತಮ್ಮ ಆಪ್ತ ಶಾಸಕ ಪ್ರಸಾದ್ ಅಬ್ಬಯ್ಯರವರ ಮೂಲಕ ಹೇಳಿಸಿದ್ದಾರೆ.
ಇದು @INCKarnataka ಸರ್ಕಾರದ ತುಷ್ಟೀಕರಣ ರಾಜಕಾರಣದ ಪರಮಾವಧಿ. ಹಿಂದೂಗಳನ್ನು… pic.twitter.com/RAZtLbw7AE
— BJP Karnataka (@BJP4Karnataka) December 14, 2023