ಬೆಂಗಳೂರು: ತೀರ್ಥಹಳ್ಳಿ ಕ್ಷತ್ರಿಯ ಮರಾಠ ಸಮಾಜಕ್ಕೆ ರಾಜ್ಯ ಸರ್ಕಾರ ಒಂದು ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಬಹು ಕಾಲದ ಬೇಡಿಕೆಯನ್ನು, ಮಾನ್ಯ ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಸರಕಾರ, ಕೆಲವು ಶರತ್ತುಗಳನ್ನು ವಿಧಿಸಿ ಮಂಜೂರು ಆದ ಜಮೀನನ್ನು ಸಾರ್ವಜನಿಕ ಸಮುದಾಯ ಭವನ ನಿರ್ಮಿಸಲು ಉಪಯೋಗಿಸಬೇಕು ಎಂದು ತಿಳಿಸಿದೆ ಎಂದು ಗೃಹ ಸಚಿವರ ಕಚೇರಿ ಮೂಲಗಳು ತಿಳಿಸಿವೆ.
ಮರಾಠ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು, ಭೂಮಿ ಮಂಜೂರು ಮಾಡಿಸಲು ಶ್ರಮಿಸಿದ, ತೀರ್ಥಹಳ್ಳಿ ಶಾಸಕರೂ, ರಾಜ್ಯ ಗೃಹ ಸಚಿ ಆರಗ ಜ್ಞಾನೇಂದ್ರ ಅವರಿಗೆ, ಸಮಾಜದ ಮುಖಂಡರು ಕೃತಜ್ಞತೆ ಸಲ್ಲಿಸಿದ್ದಾರೆ.