ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ ಮತ್ತು ಎದುರಾಳಿ ಪಕ್ಷಗಳ ನಾಯಕರ ಜಟಾಪಟಿ ತೀವ್ರಗೊಂಡಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಕಲಹ ಇದೀಗ ಬಲ ಪ್ರದರ್ಶನದ ಹಂತ ತಲುಪಿದ್ದು ಮುತ್ತಿನ ನಗರಿ ಸಿನಿಮೀಯ ರೀತಿ ಸಂಘರ್ಷಕ್ಕೆ ಸಾಕ್ಷಿಯಾಯಿತು.
ಹೈದರಾಬಾದ್ನಲ್ಲಿ ಸಿಎಂ ಕಚೇರಿ ಬಳಿಗೆ ಕಾರಿನಲ್ಲಿ ತೆರಳುತ್ತಿದ್ದರೆನ್ನಲಾದ ವೈಎಸ್ಆರ್ಪಿ ನಾಯಕಿ ವೈ.ಎಸ್.ಶರ್ಮಿಳಾರನ್ನು ಮಾರ್ಗ ಮಾದ್ಯೆ ತಡೆದ ಪೊಲಿಸರು, ಅವರನ್ನು ಕಾರಿನ ಸಮೇತ ಎಳೆದೊಯ್ದರು. ಇದು ಅಚ್ಚರಿ ಹಾಗೂ ಕುತೂಹಲಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
#WATCH | Hyderabad: Police drags away the car of YSRTP Chief Sharmila Reddy with the help of a crane, even as she sits inside it for protesting against the Telangana CM KCR pic.twitter.com/ojWVPmUciW
— ANI (@ANI) November 29, 2022
ವೈಎಸ್ಆರ್ಪಿ ನಾಯಕಿ ವೈ.ಎಸ್.ಶರ್ಮಿಳಾ ಅವರು ಟಿ.ಆರ್.ಎಸ್.ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿ ಪಾದಯಾತ್ರೆ ಹಮ್ಮಿಕೊಂಡುದ್ದಾರೆ. ಈ ಸಂದರ್ಭದಲ್ಲಿ ಸೋಮವಾರ ವಾರಂಗಲ್ ಬಳಿ ವೈಎಸ್ಆರ್ಟಿಪಿ ಹಾಗೂ ಟಿ.ಆರ್.ಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆ ತೆಲಂಗಾಣ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು.
ಈ ನಡುವೆ ಇಂದು ವೈಎಸ್ಆರ್ಪಿ ನಾಯಕಿ ವೈ.ಎಸ್.ಶರ್ಮಿಳಾ ಅವರು ಸಿಎಂ ನಿವಾಸದತ್ತ ತೆರಳುವರೆಂಬ ಮಾಹಿತಿ ಹರಿದಾಡಿತ್ತು, ಅದಾಗಲೇ ಕಾರ್ಯಪ್ರವೃತ್ತರಾದ ಪೊಲೀಸರು ಸೋಮಾಜಿಗುಡ ಬಳಿ ಶರ್ಮಿಳಾ ಅವರನ್ನು ಪತ್ತೆ ಮಾಡಿದರು. ಪ್ರಗತಿ ಭವನದತ್ತ ಕಾರಿನಲ್ಲಿ ತೆರಳುತ್ತಿದ್ದ ಶರ್ಮಿಳಾ ಅವರಿಗೆ ತಡೆಯೊಡ್ಡಿದರು.ಇದರಿಂದ ಕುಪಿತರಾದ ಶರ್ಮಿಳಾ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಜಟಾಪಟಿಯಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಭಾರೀ ಜನದಟ್ಟಣೆಯೂ ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು ಶರ್ಮಿಳಾ ಅವರಿದ್ದ ಕಾರನ್ನು ಟೋಯಿಂಗ್ ವಾಹನದಲ್ಲಿ ಎಳೆದೊಯ್ದರು. ಈ ಸಂದರ್ಭದಲ್ಲಿ ಶರ್ಮಿಳಾ ಅವರನ್ನು ಕಾರಿನಿಂದ ಕೆಳಗಿಳಿಸದೆ ವಾಹನವನ್ನು ಎಳೆದೊಯ್ಯದ ಪೊಲೀಸರ ಕಾರ್ಯವೈಖರಿಯು ರಾಜಕೀಯ ಹೈಡ್ರಾಮಾಕ್ಕೆ ಸಾಕ್ಚಿಯಾಯಿತು.
#WATCH | Hyderabad: Police drags away the car of YSRTP Chief Sharmila Reddy with the help of a crane, even as she sits inside it for protesting against the Telangana CM KCR pic.twitter.com/i7UTjAEozD
— ANI (@ANI) November 29, 2022





























































