ಶಿವಮೊಗ್ಗ: ಮಲೆನಾಡಿನ ಜನರ ಪಾಲಿಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಹೆಸರೇ ಸ್ಫೂರ್ತಿಯ ಚಿಲುಮೆ. ಅವರ ಹೆಸರಲ್ಲಿ ಅನೇಕಾನೇಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇದೀಗ ಮಲೆನಾಡ ಸೆರಗು ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮ ನಾಡಿನ ಗಮನಸೆಳೆದಿದೆ.
ಶಿವಮೊಗ್ಗದ ಶಾಲಾ ಮಕ್ಕಳು ವೀರ ಸಾವರ್ಕರ್ ಅವರ ‘ಜಯೋಸ್ತುತೆ’ ಗೀತೆಯನ್ನು ಹಾಡಿದ ಸನ್ನಿವೇಶದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಸಮೂಹ ಗಾಯನಕ್ಕೆ ಸಕತ್ ಲೈಕ್ಸ್ ಸಿಕ್ಕಿದೆ.
ಶಿವಮೊಗ್ಗದಲ್ಲಿ ಶಾಲಾ ಮಕ್ಕಳು ವೀರ ಸಾವರ್ಕರ್ ರವರ "ಜಯೋಸ್ತುತೆ" ಗೀತೆಯನ್ನು ಹಾಡಿರುವ ದೃಶ್ಯ 😍🙏
ಜೈ ಸಾವರ್ಕರ್✊
ಜೈ ಹಿಂದುತ್ವ✊pic.twitter.com/jbV1pKZabj— Devsena (Modi Ka Parivar) (@i_Nirikshana) October 22, 2022