ದೆಹಲಿ: ಯವಕರ ಪಾಲಿಗೆ ಹೀರೋ ಎಂದೇ ಗುರುತಾಗುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಉತ್ತರ ಪ್ರದೇಶದಲ್ಲಿ ಮೇನಿಯಾ ಸೃಷ್ಟಿಸಿದ್ದಾರೆ. ಕೆಲ ಸಮಯದ ಹಿಂದೆ ಕೈ ನಾಯಕಿ ಪ್ರಿಯಾಂಕ ಭೇಟಿಯಾದ ಸಂದರ್ಭದಲ್ಲಿ ಜನಜಾತ್ರೆಗೆ ಸಾಕ್ಷಿಯಾಗಿದ್ದ ಯುಪಿಯಲ್ಲಿ ಈ ಬಾರಿ ಕನ್ನಡಿಗ ಸಿ.ಟಿ.ರವಿ ಅವರು ಮೇನಿಯಾ ಸೃಷ್ಟಿಸಿದ್ದು ವಿಶೇಷ.
ಉತ್ತರ ಪ್ರದೇಶಕ್ಕೆ ಸಂಘಟನಾತ್ಮಕ ಪ್ರವಾಸ ಕೈಗೊಂಡ ಸಿ.ಟಿ.ರವಿ ಬಿಜೆಪಿ ಪಾಳಯದಲ್ಲಿ ಕುತೂಹಲದ ಕೇಂದ್ರಬಿಂದುವಾದರು. ಸಾವಿರಾರು ಕಮಲ ಕಾರ್ಯಕರ್ತರು ಜಮಾಯಿಸಿದ್ದ ಕಾರ್ಯಕ್ರಮ ಸ್ಥಳದಲ್ಲಿ ಸಿ.ಟಿ.ರವಿ ಅವರನ್ನು ಹಿರಿಯ ನಾಯಕರು ಸ್ವಗತಿಸಬೇಕಿದ್ದ ಸನ್ನಿವೇಶದ ಬದಲು ಯುವಜನ ಸಮೂಹ ರವಿ ಜೊತೆ ಸೆಲ್ಫೀಗಾಗಿ ಮಿಗಿಬಿದ್ದರು. ಕಾರ್ಯಕರ್ತರ ಉತ್ಸಾಹ ಪಕ್ಷದ ಮುಖಂಡರ ಪಾಲಿಗೆ ಅಚ್ಚರಿಯ ಕ್ಷಣವೆನಿಸಿತು.