ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅವಧಿ ಮೀರಿ ಪಾರ್ಟಿ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಹಿತ ಎಲ್ಲಾ ಸೆಲೆಬ್ರೆಟಿಗಳು ನಿರಾಳರಾಗಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಸಿದ್ದು ಅವಧಿ ಮೀರಿ ಪಾರ್ಟಿ ಮಾಡಿಲ್ಲ, ಊಟ ಮಾಡಿದ್ದರು ಎಂದು ಮಾಹಿತಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆಲೆಬ್ರೆಟಿಗಳ ವಿರುದ್ದ ಈ ಆರೋಪ ಕೇಳಿಬಂದಿದ್ದರಿಂದ ಪ್ರಕರಣ ಭಾರೀ ಸುದ್ದಿಯಾಗಿತ್ತು.
ಈ ಪ್ರಕರಣದಲ್ಲಿ ಬಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಹಿತ 8 ಮಂದಿಗೆ ನೋಟಿಸ್ ಜಾರಿ ಮಾಡಿದ್ದ ಪೊಲೀಸರು ಹೇಳಿಕೆ ಪಡೆದಿದ್ದರು. ತಾವು ಅವಧಿ ಮೀರಿ ಪಾರ್ಟಿ ಮಾಡಿಲ್ಲ, ಊಟದ ಪಾರ್ಟಿ ಮಾಡಿದ್ದಾಗಿ ನೀಡಿರುವ ಹೇಳಿಕೆಗಳನ್ನಾಧರಿಸಿ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಒಪ್ಪಿಸಿದ್ದಾರೆ ಎನ್ನಲಾಗಿದೆ.