ದೆಹಲಿ: ಸಂಸತ್ ಕಲಾಪದಲ್ಲಿ ಫೆಗಾಸಿಸ್ ವಿವಾದ ಪ್ರತಿಧ್ವನಿಸಿದ್ದು, ಒಂದೆಡೆ ಲೋಕಸಭಾ ಕಲಾಪ ಮುಂದೂಡಲ್ಪಟ್ಟರೆ, ಮತ್ತೊಂದೆಡೆ, ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್ ಅವರೊಂದಿಗೆ ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಸಂತನು ಸೇನ್ ಅವರನ್ನು ಅಮಾನತು ಮಾಡಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ರಾಜ್ಯಸಭೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ನೂಪಿಂಗ್ ವಿಷಯ ಬಗ್ಗೆ ಹೇಳಿಕೆ ನೀಡಲು ಮುಂದಾದಾಗ, ಸಂತನು ಸೇನ್ ಅವರು ಸಚಿವರ ಕೈಯಲ್ಲಿದ್ದ ಕಾಗದಗಳನ್ನು ಕಸಿದುಕೊಂಡು ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಈ ಅಶಿಸ್ತಿನ ಕಾರಣಕ್ಕಾಗಿ ಅವರು ಆಗಸ್ಟ್ 13ರವರೆಗೂ ಮುಂಗಾರು ಅಧಿವೇಶನಪೂರ್ತಿ ಸದನದಿಂದ ಹೊರಗುಳಿಯುವಂತಾಗಿದೆ.