ಬೆಂಗಳೂರು: ಆರ್.ಎಸ್.ಎಸ್., ಜನಸಂಘ ಮತ್ತು ಬಿಜೆಪಿಯ ಹಿರಿಯ ನಾಯಕ ಉರಿಮಜಲು ರಾಮ್ ಭಟ್ ನಿಧನಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಂಬನಿ ಮಿಡಿದಿದ್ದಾರೆ.
ಕರಾವಳಿ ಭಾಗದಲ್ಲಿ ಸಂಘ ಪರಿವಾರವನ್ನು ಕಟ್ಟಿ ಬೆಳೆಸಲು ಅವರು ಕಾರಣೀಭೂತರಾಗಿದ್ದರು. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಅವರು ಮೌಲ್ಯಾಧಾರಿತ ಶಿಕ್ಷಣದ ಅಗ್ರೇಸರರಾಗಿ, ಸಂಸ್ಥಾಪಿಸಿದ ಪುತ್ತೂರಿನಲ್ಲಿ ಶ್ರೀ ವಿವೇಕಾನಂದ ಕಾಲೇಜು ಉತ್ತಮ ಮೌಲ್ಯ ಮತ್ತು ಶ್ರೀಮಂತ ನೈತಿಕತೆಯೊಂದಿಗೆ ಸಾವಿರಾರು ಅತ್ಯುತ್ತಮ ವೃತ್ತಿಪರರನ್ನು ರೂಪಿಸಿದೆ ಎಂದಿದ್ದಾರೆ.
ವಿಧಾನಸಭೆಯ ಸದಸ್ಯರಾಗಿದ್ದ ರಾಮ್ ಭಟ್ ಅವರ ಭಾಷಣ ಪ್ರೌಢಿಮೆಯಿಂದ ಕೂಡಿರುತ್ತಿತ್ತು, ಸ್ಫುಟವಾಗಿರುತ್ತಿತ್ತು, ಅವರ ಮಾತುಗಳು ಸ್ಪಷ್ಟತೆ ಮತ್ತು ನಿಖರತೆಯೊಂದಿಗೆ ಸಮಚಿತ್ತವಾಗಿರುತ್ತಿತ್ತು.
ರಾಮ್ ಭಟ್ ಅವರ ಅಕಾಲಿಕ ನಿಧನದಿಂದ ಒಟ್ಟಾರೆಯಾಗಿ ಸಂಘ ಪರಿವಾರದ, ಅದರಲ್ಲೂ ಸಾರ್ವಜನಿಕ ಜೀವನದ ಒಂದು ವೈಭವೋಪೇತ ಅಧ್ಯಾಯ ಕೊನೆಯಾಗಿದೆ ಎಂದವರು ಎಂದವರು ನೋವು ವ್ಯಕ್ತಪಡಿಸಿದ್ದಾರೆ.