ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿ ಸಲ್ಲಿಸಿರುವ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಇದು ಬಿಜೆಪಿ ಸರ್ಕಾರದ ಸೇಡಿನ ಕ್ರಮ ಎಂದು ಕಾಂಗ್ರೆಸ್ ನಾಯಕ, ಮಾಜಿ ಶಾಸಕ ರಮೇಶ್ ಬಾಬು ಆರೋಪಿಸಿದ್ದಾರೆ.
ಬೆಳವಣಿಗೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ದೇಶದ ತನಿಖಾ ಸಂಸ್ಥೆಗಳ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ, ಸೇಡಿನ ರಾಜಕಾರಣ ಮಾಡಲು ED ಮುಖಾಂತರ ಆರೋಪ ಪಟ್ಟಿ ದಾಖಲಿಸಲಾಗಿದೆ. ಈ ದೇಶದಲ್ಲಿ ಇನ್ನೂ ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದು ದಿನೇ ದಿನೇ ಬಿಜೆಪಿ ಬೆತ್ತಲೆ ಆಗುತ್ತಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿ ಮುಖ್ಯ ವಕ್ತಾರರು ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಬದುಕಿನ ಮೇಲೆ ಮಾತನಾಡಿ ಬಿಜೆಪಿ ಮತ್ತು ಸಂಘ ಪರಿವಾರದ ಹೀನ ನಾಲಿಗೆ ಹರಿಬಿಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಟೀಕೆ ಮಾಡಿ ರಾಜಕೀಯ ಅಸ್ತಿತ್ವ ಕಂಡು ಕೊಳ್ಳಲು ಪ್ರಯತ್ನ ಮಾಡುತ್ತಿರುವ ಅಬ್ಬೆಪಾರಿಗಳು ಮೊದಲು ಸಾರ್ವಜನಿಕ ಜೀವನದಲ್ಲಿ ಕೊಡುವ ಹೇಳಿಕೆಗಳು ಬಿಜೆಪಿ ಕಲಿಸಿಕೊಟ್ಟ ಸಂಸ್ಕೃತಿ ಎಂದು ಹೇಳಲಿ! ಎಂದು ರಮೇಶ್ ಬಾಬು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಾಂಧಿ ಕೊಲೆ ಮಾಡಿದ ಆರೋಪ ಇರುವ, ಎಬ್ಕೌಂಟರ್ ಆರೋಪದಲ್ಲಿ ಜೈಲು ಕಂಡ, ಕೋಮು ಗಲಭೆಯಲ್ಲಿ ರಾಜಕೀಯ ಅಸ್ತಿತ್ವ ಕಾಣುತ್ತಿರುವ ಅಬ್ಬೆ ಪಾರಿಗಳು kpcc ಅಧ್ಯಕ್ಷರನ್ನ ಅಥವಾ ಕಾಂಗ್ರೆಸ್ ಪಕ್ಷವನ್ನು ಇಂತಹ ಕೆಳಮಟ್ಟದ ಟೀಕೆ ಇಂದ ಅಳಿಸಲು ಸಾಧ್ಯವಿಲ್ಲ. ED ಬಳಕೆಯ ಬಿಜೆಪಿ ಆಟಕ್ಕೆ ನಮ್ಮ ಧಿಕ್ಕಾರ ಎಂದು ರಮೇಶ್ ಬಾಬು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.





















































